ನಿಡ್ಮಾರು ವಿಶ್ವಕರ್ಮ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಮಧುಚಂದ್ರ, ನಾರಾಯಣ ಎಂ.ಆರ್ ಪ್ರ. ಕಾರ್ಯದರ್ಶಿ

0

ಕೊಡಿಯಾಲ ಗ್ರಾಮದ ನಿಡ್ಮಾರಿನಲ್ಲಿರುವ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಮಧುಚಂದ್ರ ಕೆ.ಹೆಚ್ ಪಂಜ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಎಂ.ಆರ್, ಕೋಶಾಧಿಕಾರಿಯಾಗಿ ಶೇಷಪ್ಪ ಆಚಾರ್ಯ ನಿಡ್ಮಾರು ಆಯ್ಕೆಗೊಂಡಿದ್ದಾರೆ.


ಉಪಾಧ್ಯಕ್ಷರಾಗಿ ದಿನೇಶ್ ಬಾಚೋಡಿ, ಕಾರ್ಯದರ್ಶಿಯಾಗಿ ಪ್ರವೀಣ್ ಕಾಣಿಯೂರು ಮತ್ತು ನಿರ್ದೇಶಕರಾಗಿ ಹರಿನಾರಾಯಣ ಕಳಂಜ‌, ರಮೇಶ್ ಕೊಳೆಂಜಿಕೋಡಿ, ಗೋವರ್ಧನ ಕಲ್ಲಗದ್ದೆ, ವಿಶ್ವನಾಥ ಮುಂಡುಗಾರು, ಸತ್ಯಪ್ರಸಾದ್ ಅಲೆಕ್ಕಾಡಿ ಹಾಗೂ ಅರುಣಾಕ್ಷಿ ಆಚಾರ್ಯ ನಿಡ್ಮಾರು ಆಯ್ಕೆಯಾದರು.


ಆ. 11ರಂದು ಮಂಡಳಿಯ ಅಧ್ಯಕ್ಷ ಮಧುಚಂದ್ರ ಕೆ.ಹೆಚ್. ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷ ಮಧುಚಂದ್ರ ಕೆ.ಹೆಚ್ ಪಂಜ ಸ್ವಾಗತಿಸಿ, ದಿನೇಶ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್ ವರದಿ ವಾಚಿಸಿದರು. ಕೋಶಾಧಿಕಾರಿ ಶೇಷಪ್ಪ ಆಚಾರ್ಯ ಲೆಕ್ಕಪತ್ರ ಮಂಡಿಸಿದರು.