ಪಂಜ: ಕೆಸರ್ ದ ಪರ್ಬ -2024 ಉದ್ಘಾಟನೆ

0

ಜೈ ಕರ್ನಾಟಕ ಯುವಕ ಮಂಡಲ, ಕೃಪಾ ಯುವತಿ ಮಂಡಲ ಅಳ್ಪೆ-ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಕೆಸ ರ್ ದ ಪರ್ಬ -2024 ಆ.18. ರಂದು ಪಂಜದ ಅಳ್ಪೆ ಕುದ್ಕುಳ್ಳಿ ಹಿಮಕರರ ಗದ್ದೆಯಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕರ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ಉದ್ಘಾಟಿಸಿದರು.

ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ವಿದ್ಯಾನಂದ ಮೇಲ್ಮನೆ ಅಧ್ಯಕ್ಷತೆ ವಹಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದ ಹೊಳೆ, ಸ್ಥಳ ದಾನಿ ಹಿಮಕರ ಕುದ್ಕುಳಿ, ಅಳ್ಪೆ ಕೃಪಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಶಿರಾಜೆ, ಯುವಕ ಮಂಡಲದ ಕಾರ್ಯದರ್ಶಿ ಗಣೇಶ್ ಕರಿಮಜಲು, ಯುವತಿ ಮಂಡಲದ ಕಾರ್ಯದರ್ಶಿ ಶ್ರೀಮತಿ ಧನ್ಯ, ಕ್ರೀಡಾಕೂಟ ಸಂಚಾಲಕ ಪದ್ಮನಾಭ ಕರಿ ಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶರಣ್ಯ ಕೋಟ್ಯಯಡ್ಕ ಪ್ರಾರ್ಥಿಸಿದರು.ನಾರಾಯಣ ಶಿರಾಜೆ ವೇದಿಕೆಗೆ ಆಹ್ವಾನಿಸಿದರು. ಗುರು ಪ್ರಸಾದ್ ತೋಟ ಪ್ರಾಸ್ತಾವಿಕ ಮಾತನಾಡಿದರು.ಪ್ರಕಾಶ್ ಅಳ್ಪೆ ಸ್ವಾಗತಿಸಿದರು. ಕೌಶಿಕ್ ಕುಳ ನಿರೂಪಿಸಿದರು. ಶ್ರೀಮತಿ ಧನ್ಯ ವಂದಿಸಿದರು. ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.