ಗುತ್ತಿಗಾರು : ಮೊಗ್ರ ಬೂತಿನ ಬಿಜೆಪಿ ಕಾರ್ಯಕರ್ತರ ಸಭೆ

0

ಗುತ್ತಿಗಾರು ಗ್ರಾಮದ ಮೊಗ್ರ ಬೂತಿನ ಬಿಜೆಪಿ ಕಾರ್ಯಕರ್ತರ ಸಭೆ ಕಮಿಲ ತೀರ್ಥರಾಮ ಗೌಡರ ಮನೆಯಲ್ಲಿ ಹಣ್ಣಿನ ಗಿಡವನ್ನು ನೆಡುವ ಮೂಲಕ ಆ. 25 ರಂದು ಚಾಲನೆ ನೀಡಲಾಯಿತು.

ಶಕ್ತಿ ಕೇಂದ್ರದ ಮಾಜಿ ಪ್ರಮುಖ್ ಜಯಪ್ರಕಾಶ್ ಮೊಗ್ರ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸುವ ಚಿಂತನೆ ಮಾಡಿದರು. ಬಳಿಕ ಎಲ್ಲರೂ ಜೊತೆಯಾಗಿ ಮಾನ್ಯ ಪ್ರಧಾನ ಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದರು. ಸಭೆಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೊಗ್ರ ಬೂತ್ ಅಧ್ಯಕ್ಷ ಜಗದೀಶ್ ಚಿಕ್ಮುಳಿ ಸ್ವಾಗತಿಸಿ, ನಿತ್ಯಾನಂದ ಅಂಬೆಕಲ್ಲು ವಂದಿಸಿದರು.

ಕಾರ್ಯದರ್ಶಿ ಲೋಕೇಶ್ ಕಮಿಲ ಮತ್ತು ರಾಧಾಕೃಷ್ಣ ತುಪ್ಪದಮನೆ ಕಾರ್ಯಕ್ರಮ ನಿರೂಪಿಸಿದರು.