ವೆಂಕಟಕೃಷ್ಣ ರಾವ್ ಪೆರುವಾಜೆಯವರಿಗೆ ಅಮೃತ ಮಹೋತ್ಸವ ಕಾರ್ಯಕ್ರಮ

0

ಪೆರುವಾಜೆಯ ವೆಂಕಟಕೃಷ್ಣ ರಾವ್ ರವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಆ. 23 ಮತ್ತು 24ರಂದು ನಡೆಯಿತು. ಆ. 23ರಂದು ಬಟ್ರಪ್ಪಾಡಿ ಸೂರ್ಯನಾರಾಯಣ ಭಟ್ಟರ ನೇತೃತ್ವದಲ್ಲಿ ಐಂದ್ರಿ ಶಾಂತಿ, ಸಂಜೆ ಪೆರುವಾಜೆ ಶ್ರೀ ಜಲದುರ್ಗ ದೇವಿಯ ಸನ್ನಿಧಿಯಲ್ಲಿ ಮೂಡಪ್ಪ ಸೇವೆ, ಮಹಾರಂಗಪೂಜೆ, 108 ಕಾಯಿ ನಾಳಿಕೇರ ಗಣಪತಿ ಹೋಮ, ಚಂಡಿಕಾ ಹೋಮ ನಡೆಯಿತು.
ವೆಂಕಟಕೃಷ್ಣ ರಾವ್ ರವರ ಮನೆಯವರಾದ ಶ್ರೀಮತಿ ಸ್ವಾತಿ, ರಾಘವೇಂದ್ರ ಶ್ರೀಮತಿ ಸುಮನ, ಲೋಹಿತ್, ರಶ್ಮಿ, ಹರೀಶ್, ಆದರ್ಶ್, ಹಂಸಿನಿ, ಅವ್ಯುಕ್ತ್ ಸೇರಿದಂತೆ ವೆಂಕಟಕೃಷ್ಣ ರಾವ್ ರವರ ಬಂಧುಗಳು, ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.