ಬೆಳ್ಳಾರೆ ಸ್ನೇಹಿತರ ಕಲಾಸಂಘದ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

0

ಬೆಳ್ಳಾರೆ ಸ್ನೇಹಿತರ ಕಲಾಸಂಘದ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆ. 19 ರಂದು ಸ್ನೇಹಿತರ ಕಲಾಸಂಘ ಬೆಳ್ಳಾರೆ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಸ್ನೇಹಿತರ ಕಲಾಸಂಘದ ಕಚೇರಿಯಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಸಂಘದ ಪೂರ್ವಧ್ಯಕ್ಷರಾದ ಕೊರಗಪ್ಪ ನಾಯ್ಕ ಕುರುಂಬುಡೇಲು ವಹಿಸಿ, ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದರು. ಪೂರ್ವಾಧ್ಯಕ್ಷರಾದ ಆನಂದ ಗೌಡ ಪಡ್ಪು ಹಾಗೂ ಸಂಜಯ್ ನೆಟ್ಟಾರು ರಕ್ಷಾ ಬಂಧನದ ಮಹತ್ವದ ಬಗ್ಗೆ ಸಂದರ್ಬೋಚಿತವಾಗಿ ಮಾತನಾಡಿದರು. ಸೇರಿದವರು ರಕ್ಷೆಯನ್ನು ಪರಸ್ಪರ ಕಟ್ಟುವ ಮೂಲಕ ಸಹೋದರತೆ ಭಾವನೆಯನ್ನು ತೋರಿದರು. ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು ಸ್ವಾಗತಿಸಿ, ಕಾರ್ಯದರ್ಶಿ ವಸಂತ ಗೌಡ ಪಡ್ಪು ವಂದಿಸಿದರು.