ಐವರ್ನಾಡು : ಸರಸ್ವತಿ ಗುತ್ತಿಗಾರುಮೂಲೆಯವರಿಗೆ ಶ್ರದ್ಧಾಂಜಲಿ ,ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಸರಸ್ವತಿಯವರು ಆ.18 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಆ.28 ರಂದು ಗುತ್ತಿಗಾರುಮೂಲೆ ಮನೆಯಲ್ಲಿ ನಡೆಯಿತು.
ಲೋಕೇಶ್ ಚೆಮ್ನೂರು ರವರು ದಿ.ಸರಸ್ವತಿ ಗುತ್ತಿಗಾರುಮೂಲೆಯವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪುತ್ರರಾದ ಹರೀಶ್ ಗುತ್ತಿಗಾರುಮೂಲೆ,ಲಿಂಗಪ್ಪ,ಸೀತಾರಾಮ ಪುತ್ರಿಯರಾದ ವಸಂತಿ,ಲೀಲಾವತಿ,ಕಮಲಾಕ್ಷಿ,ನೇತ್ರಾವತಿ ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳನ್ನು ಉಪಸ್ಥಿತರಿದ್ದರು.


ಆಗಮಿಸಿದ ನೂರಾರು ಜನರು ದಿ.ಸರಸ್ವತಿ ಗುತ್ತಿಗಾರುಮೂಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.