ಕುರುಂಜಿಭಾಗ್‌ನ ಪಾಟ್‌ಶಾಟ್ಸ್ ನಲ್ಲಿ ಸ್ನೂಕರ್ ಚಾಂಪಿಯನ್‌ ಶಿಪ್

0

ಸುಳ್ಯ ಮತ್ತು ಪುತ್ತೂರು ತಾಲೂಕಿನ ಸ್ನೂಕರ್ ಆಟಗಾರರ ಮುಕ್ತ ಸ್ನೂಕರ್ ಚಾಂಪಿಯನ್‌ಶಿಪ್ ಪಂದ್ಯಾಟವು ಕುರುಂಜಿಭಾಗ್‌ನ ಪಾಟ್‌ಶಾಟ್ಸ್ನಲ್ಲಿ ಆ.15 ರಂದು ನಡೆಯಿತು.

ಈ ಪಂದ್ಯಾಟವನ್ನು ಶ್ರೀ ಭಗವತಿ ಯುವ ಸೇವಾ ಸಂಘ (ರಿ.) ಬೂಡು ಕೇರ್ಪಳ ಕುರುಂಜಿಗುಡ್ಡೆ ಇದರ ಅಧ್ಯಕ್ಷರಾದ ಸುನಿಲ್ ಕುಮಾರ್ ಕೇರ್ಪಳ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೂಡು ರಾಧಾಕೃಷ್ಣ ರೈ, ಲಿಖೇಶ್ ಕ್ಯೂ ಕ್ಲಬ್ ಕುರುಂಜಿಭಾಗ್, ಸುರೇಶ್ ಶೆಟ್ಟಿ ಸ್ಪಾಟ್ ಕ್ಲಬ್ ಪುತ್ತೂರು, ವಿಜಯಕುಮಾರ್ ಕುರುಂಜಿಗುಡ್ಡೆ ಉಪಸ್ಥಿತರಿದ್ದರು.

ಸ್ನೂಕರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕಿಶೋರ್ ಶೆಟ್ಟಿ ಬೂಡು, ದ್ವಿತೀಯ ಬಹುಮಾನವನ್ನು ರಾಝಿ ಹಾಕ್ಸ್, ಪಂದ್ಯಾಟದ ಟಾಪ್ ಸ್ಕೋರರ್ ಪ್ರಶಸ್ತಿಯನ್ನು ಪುತ್ತೂರಿನ ನೀತು, ಸುಳ್ಯದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ತೌಸಿಫ್ ಸುಳ್ಯ ಇವರುಗಳು ಪಡೆದುಕೊಂಡರು. ಸೆಮಿ ಫೈನಲ್ ಪ್ರವೇಶಿಸಿದ ಆಟಗಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಭಗವತಿ ಯುವ ಸೇವಾ ಸಂಘ (ರಿ.) ಬೂಡು ಇದರ ಸಂಘಟನಾ ಕಾರ್ಯದರ್ಶಿ ಪ್ರದೀಪ್ ರೈ ಬೂಡು, ನಿಝಾಮ್ ಟೌನ್ ಕ್ಯೂಬ್, ಖಲೀಲ್ ಕಟ್ಟೆಕ್ಕಾರ್, ಮನ್‌ಶೀಫ್ ಲಂಡನ್ ಬೌಲ್ಡ್, ಗೌರವ್ ಸುಳ್ಯ ಇವರುಗಳು ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಶೆಟ್ಟಿ ಬೂಡು ಕಾರ್ಯಕ್ರಮ ನಿರೂಪಿಸಿದರು.