ಬಿದ್ದು ಸಿಕ್ಕಿದ ಮೊಬೈಲ್ ಫೋನ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಾಲೇಜು ವಿದ್ಯಾರ್ಥಿ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿ ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಬೆಲೆಬಾಳುವ ಮೊಬೈಲ್ ಫೋನನ್ನು ವಾರಿಸುದಾರರಿಗೆ ಹಿಂತಿರುಗಿಸಿ ಕಾಲೇಜ್ ವಿದ್ಯಾರ್ಥಿ ಪ್ರಾಮಾಣಿಕತೆ ಯನ್ನು ಮೆರೆದಿದ್ದಾರೆ.

ಅರಂತೋಡು ನಿವಾಸಿ ಸಂದೀಪ್ ಎಂಬ ವಿದ್ಯಾರ್ಥಿ ಕೊಡಿಯಾಲ ಬೈಲು ನಲ್ಲಿ ಕಳೆದ 2 ದಿನ ಮೊದಲು ನಡೆದ ಕಬಡ್ಡಿ ಪಂದ್ಯಾಟಕ್ಕೆ ಬಂದಿದ್ದ ಅವರ ರೆಡ್ಮಿ 5 ಜಿ ಮೊಬೈಲ್ ಫೋನ್ ಕಳೆದುಕ್ಕೊಂಡಿದ್ದರು.
ಈ ಫೋನ್ ಸೆ 2 ರಂದು ಸಂಜೆ ಗಾಂಧಿನಗರ ಕೆ ಪಿ ಎಸ್ ಕಾಲೇಜಿನ ಪ್ರಥಮ ಪಿ ಯು ಸಿ ವಿದ್ಯಾರ್ಥಿ ಕೃತಿಕ್ ಗೌಡ ಎಂಬವರಿಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಸಿಕ್ಕಿದ್ದು ಅದನ್ನು ಪ್ರಾಮಾಣಿಕತೆಯಿಂದ ಸುಳ್ಯ ಠಾಣೆಗೆ ತಂದು ನೀಡಿ ವಾರಿಸುದಾರರಿಗೆ ಮರಳಿಸಿದ್ದಾರೆ.