ಯುವ ಕಲಾವಿದ ಅಮೃತ್ ಸಾಲಿಯಾನ್ ಕೈಯಲ್ಲಿ ಮೂಡಿಬಂದ ಪುಟ್ಟ ಗಣಪನಿಗೆ ಉತ್ಸವ

0

ಯುವ ಕಲಾವಿದ ಅಮೃತ್ ಸಾಲಿಯಾನ್ ಕೈಯಲ್ಲಿ ಮೂಡಿಬಂದ ಪುಟ್ಟ ಗಣಪತಿಗೆ ಮನೆಯಲ್ಲೇ ಪೂಜೆ, ಭಜನೆ.
ದುಗ್ಗಲಡ್ಕ ಸಮೀಪದ ಮೂಡೆಕಲ್ಲು ದಯಾನಂದ ಸಾಲಿಯನ್ ಮತ್ತು ಶ್ರೀಮತಿ ರಂಜಿನಿ ದಂಪತಿಯ ಪುತ್ರ ಅಮೃತ್ ಚಿತ್ರಕಲೆಯಲ್ಲಿ ಪದವೀಧರನಾಗಿದ್ದು, ಹಲವಾರು ಚಿತ್ರಗಳನ್ನು, ಮಣ್ಣಿನ ವಿಗ್ರಹಗಳನ್ನು ರಚಿಸಿದ್ದಾರೆ.

ಪ್ರತೀವರ್ಷ ಚೌತಿ ಸಂದರ್ಭದಲ್ಲಿ ಸುಂದರವಾದ ಗಣಪತಿ ವಿಗ್ರಹ ತಯಾರಿಸುತ್ತಾರೆ.

ಮನೆಯಲ್ಲೇ ಪ್ರತಿಷ್ಠಾಪಿಸಿ, ಪೂಜೆ,ಭಜನೆ ನಡೆಸಿ ಜಲಸ್ಥಂಭನಗೊಳಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಸೆ.8ರಂದು ಪುಟ್ಟ ಗಣಪನ ಪ್ರತಿಷ್ಠೆ ನಡೆದು ದುಗ್ಗಲಡ್ಕ ಅಯ್ಯಪ್ಪ ಭಜನಾ ತಂಡ ಮತ್ತು ಸ್ಥಳೀಯರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮನೆಯ ಹಿರಿಯರಾದ ಸೋಮಪ್ಪ ಪೂಜಾರಿ ಸೇರಿದಂತೆ ಮನೆಯವರು, ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಸೇರಿದಂತೆ ಊರ ಭಕ್ತಾದಿಗಳು, ಬಂಧುಗಳು ಉಪಸ್ಥಿತರಿದ್ದರು. ಸುಂದರ ರಾವ್ ಕೊಡೆಂಚಡ್ಕ ಪೂಜಾ ಕಾರ್ಯ ನಿರ್ವಹಿಸಿದರು.