ಹರಿಹರ ಪಲ್ಲತಡ್ಕ: ಕಾಂಡದಲ್ಲೇ ಹೊರ ಬಂತು ಬಾಳೆಗೊನೆ !

0

ಹರಿಹರ ಪಲ್ಲತಡ್ಕದ ಕಲ್ಲೇ ಮಠದ ಮುರಳಿ ಹರಿಹರ ಎಂಬವರ ತೋಟದಲ್ಲಿ ನೇಂದ್ರ ಬಾಳೆ ಗಿಡದ ಕಾಂಡದ ಅರ್ಧ ಭಾಗದಲ್ಲಿ ಗೊನೆ ಹಾಕಿ ವಿಸ್ಮಯ ಮೂಡಿದೆ.

ಎಂಟು ತಿಂಗಳ ಹಿಂದೆ ತಮ್ಮ ತೋಟದಲ್ಲಿ ನೇಂದ್ರ ಬಾಳೆ ಗಿಡಗಳನ್ನು ನೆಟ್ಟಿದ್ದರು. ಕೆಲ ಬಾಳೆ ಗಿಡಗಳು ಇತ್ತೀಚೆಗೆ ಗೊನೆ ಹಾಕಿದ್ದರೆ ಕೆಲವು ಸತ್ತು ಹೋಗಿತ್ತು. ಈ ಒಂದು ಬಾಳೆ ಗಿಡದಲ್ಲಿ ತಿಂಗಳ ಹಿಂದೆ ಬುಡದಿಂದ ಒಂದೂವರೆ ಅಡಿ ಮೇಲೆ ಗೊನೆ ಹಾಕಿದ್ದು ವಿಸ್ಮಯ ಮೂಡಿಸಿದೆ.

ಸಾಧಾರಣವಾಗಿ ಬಾಳೆಯ ತುದಿಯಲ್ಲಿ ಗೊನೆ ಹೊರ ಬರುವುದು ವಾಡಿಕೆ, ಆದರೆ ಇದರಲ್ಲಿ ಮಧ್ಯೆ ಭಾಗದಲ್ಲಿ ಗೊನೆ ಬಂದು ಪ್ರಕೃತಿ ವಿಸ್ಮಯ ಮೂಡಿಸಿದೆ.