ಹಾಲೆಮಜಲು : ಆದರ್ಶ ಯುತ್ ಕ್ಲಬ್ ಮಹಾಸಭೆ – ಪದಗ್ರಹಣ

0

ನಾಲ್ಕುರು ಗ್ರಾಮದಲ್ಲಿರುವ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇದರ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸೆ. 15 ರಂದು ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ಸತೀಶ ಬಂಬುಳಿ ವಹಿಸಿದ್ದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ದಿನೇಶ್ ಹಾಲೆಮಜಲು, ಕಾರ್ಯದರ್ಶಿ ದೀಪಕ್ ಕುಂಬಡ್ಕ ಉಪಸ್ಥಿತರಿದ್ದರು.

ಮುಂದಿನ ಅವಧಿಗೆ ಅಧ್ಯಕ್ಷರಾಗಿ ಆಕರ್ಷ್ ಕುಳ್ಳಂಪಾಡಿ, ಕಾರ್ಯದರ್ಶಿಯಾಗಿ ಪ್ರಜ್ವಲ್ ಕುಂಬಡ್ಕ, ಜೊತೆ ಕಾರ್ಯದರ್ಶಿಯಾಗಿ ಉದಯ ಸಾಲ್ತಾಡಿ, ಖಜಾಂಜಿಯಾಗಿ ದೀಕ್ಷಿತ್ ಹಾಲೆಮಜಲು, ಕ್ರೀಡಾ ಕಾರ್ಯದರ್ಶಿಯಾಗಿ ಅರುಣ ಕುಮಾರ ಅಮೆಮನೆ, ಉಪಾಧ್ಯಕ್ಷರಾಗಿ ಕುಸುಮಾಧರ ಗುಡ್ಡೆಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕುಳ್ಳಂಪಾಡಿ, ಗೌರವ ಸಲಹೆಗಾರರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಆಯ್ಕೆ ಸಂದರ್ಭದಲ್ಲಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.