ಸುಣ್ಣಮೂಲೆ ಅಹ್ಮದುಲ್ ಬದವೀ ಮಿಲಾದ್ ಕಮಿಟಿ ವತಿಯಿಂದ ಮೀಲಾದ್ ಪೆಸ್ಟ್ 2024 ಹಾಗೂ ಸನ್ಮಾನ ಕಾರ್ಯಕ್ರಮ

0

ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ )ರವರ 1499ನೆ ಜನ್ಮ ದಿನಾಚರಣೆ
ಬಾಗವಾಗಿ ಈದ್ ಮೀಲಾದ್ ಆಚರಣೆ ಸುಣ್ಣ ಮೂಲೆ ಬದ್ರಿಯಾ ನಗರ ಅಹಮದುಲ್ ಬದವೀ ಮಸ್ಜಿದ್ ನಲ್ಲಿ ಸೆ 16 ರಂದು ನಡೆಯಿತು.

ಸಭಾ ಕಾರ್ಯಕ್ರಮ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ,ಸನ್ಮಾನ ಕಾರ್ಯಕ್ರಮ, ಮೌಲೂದ್ ಪಾರಾಯಣ ದ್ವಜಾರೋಹಣ ಕಾಲ್ನಡಿಗೆ ಜಾಥಾ ನಡೆಯಿತು.

ಸೆ 15 ರಂದು ಮಗ್ರಿಬ್ ನಮಾಜ್ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಡೆಯಿತು. ಮಿಲಾದ್ ಕಮೀಟಿ ಅಧ್ಯಕ್ಷರಾದ ಹುಸೈನ್ ಗೌಸಿಯಾರವರು ಅಧ್ಯಕ್ಷತೆ ವಹಿಸಿದ್ದರು. ಬಹು.ಅಬ್ದುಲ್ ರಹಿಮಾನ್ ಸಹದಿ ದುವಾ ನೆರವೇರಿಸಿದರು
ಅಬ್ದುಲ್ ನಾಸಿರ್ ಸಹದಿ ಸ್ಥಳೀಯ ಖತೀಬರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮೀಲಾದ್ ನೆಬಿ ದಿನ ಬೆಳಿಗ್ಗೆ 9 ಗಂಟೆಗೆ ಜಮಾಹತ್ ಅಧ್ಯಕ್ಷರಾದ ಬಾಪು ಪಿಎ ಹಾಗು ಮೀಲಾದ್ ಕಮೀಟಿ ಅಧ್ಯಕ್ಷರಾದ ಹುಸೈನ್ ಗೌಸಿಯಾರ ನೇತೃತ್ವದಲ್ಲಿ ದ್ವಜಾರೋಹಣ ನಡೆಯಿತು.

ಬಳಿಕ ಪ್ರವಾದೀ ಸಂದೇಶ ಕಾಲ್ನಡಿಗೆ ಜಾಥಾ ಹಾಗು ಹುಬ್ಬುರ್ರಸೂಲ್ ಪ್ರಭಾಷಣ ನಡೆಯಿತು.

ಅತಿಥಿಗಳಾಗಿ ಶಿಯಾಬುದ್ದೀನ್ ಅಹ್ಸನಿ ಮುಅಲ್ಲಿಂ ಎನ್ ಐ ಎಂ, ಬಾಪು ಪಿ ಎ ಅಧ್ಯಕ್ಷರು ಎ ಬಿ ಜೆ ಸಿ ಜಮಾಅತ್ ಕಮೀಟಿ,ಉಬೈದು ರಹ್ಮಾನ್ ಪ್ರದಾನ ಕಾರ್ಯದರ್ಶಿ ಕೆ ಎಂ ಜೆ ಸುಣ್ಣ ಮೂಲೆ,ಅಬ್ದುಲ್ ರಹಿಮಾನ್ ಟಿ ಎಂ ಅದ್ಯಕ್ಷರು ಎ ಬಿ ಜೆ ಎಂ ಗಲ್ಫ್ ಕಮಿಟಿ, ಅಬ್ದುಲ್ ಮಜೀದ್ ಎ ಕೆ ಅಧ್ಯಕ್ಷರು ಎಸ್ ವೈ ಎಸ್ ಸುಣ್ಣ ಮೂಲೆ,,ಅಬ್ದುಲ್ ಕರೀಂ ಟಿ ಎಂ ಅಧ್ಯಕ್ಷರು SSF ಸುಣ್ಣ ಮೂಲೆ,ಅಹ್ಮದ್ ಮುರ್ಶಿದ್ ಕೆ ಬಿ ಅದ್ಯಕ್ಷರು ಎಸ್ ಬಿ ಎಸ್ ಸುಣ್ಣ ಮೂಲೆ,ಭಾಗವಹಿಸಿದರು.

ಸನ್ಮಾನ
ಕಳೆದ10_ವರ್ಷಗಳಿಂದ ಸಮಯಕ್ಕೆ ಸರಿಯಾಗಿ – ಸುರಕ್ಷಿತ ವಾಗಿ ಯಾವುದೇ ವಿದ್ಯಾರ್ಥಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಸಮಯ ನಿಷ್ಠೆ ಯೊಂದಿಗೆ ಮದರಸಕ್ಕೆ ತಲುಪಿಸಿದ ಗಣೇಶ್_ಕನಕಮಜಲು ರವರನ್ನು
ಕಾರ್ಯಕ್ರಮದಲ್ಲಿ ಜಮಾಅತ್ ಕಮೀಟಿ ,ಮಿಲಾದ್ ಕಮೀಟಿ ಹಾಗು ಗಲ್ಫ್ ಕಮೀಟಿ ವತಿಯಿಂದ ಉಡುಗರೆ ನೀಡಿ ಸನ್ಮಾನಿಸಲಾಯಿತು

ಅಬ್ದುಲ್ ಹಮೀದ್ ಗೌಸಿಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಗೈದರು.ಇಕ್ಬಾಲ್ ಟಿ ಎಂ ವಂದಿಸಿದರು.