ಅ.6 : ಶ್ರೀ ಕೃಷ್ಣ ಭಜನಾ ಮಂದಿರ (ರಿ) ಸೋಣಂಗೇರಿ ಇದರ ಪುನರ್ ನಿರ್ಮಾಣ ಕಾರ್ಯದ ಕುರಿತು ಸಾರ್ವಜನಿಕ ಸಭೆ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರವು ಕಳೆದ 62 ವರ್ಷಗಳಿಂದ ಸೋಣಂಗೇರಿಯ ಹೃದಯ ಭಾಗದಲ್ಲಿದ್ದು, ಇಲ್ಲಿ ವಾರದ ಭಜನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಕೆಲವು ಸಂಘ ಸಂಸ್ಥೆಗಳ ಸಭೆಗಳು ನಡೆದುಕೊಂಡು ಬಂದಿದೆ.

ಮಂದಿರದ ಪ್ರಸ್ತುತ ಕಟ್ಟಡವು ತೀರಾ ಹಳೆಯದಾಗಿದ್ದು ಮಂದಿರದ ಪುನರ್ ನಿರ್ಮಾಣ ಮಾಡುವ ಬಗ್ಗೆ ಆಡಳಿತ ಸಮಿತಿಯು ಯೋಚನೆ ಮತ್ತು ಚಿಂತನೆಯನ್ನು ಮಾಡಿದ್ದು, ಈ ಬಗ್ಗೆ ಈಗಾಗಲೇ ಹಲವು ಯುವಕರು ಮುಂದೆ ಬಂದು ಪುನರ್ ನಿರ್ಮಾಣ ಕಾರ್ಯಕ್ಕೆ ಸಮಿತಿಯ ಅವಶ್ಯಕತೆ ಇದೆ ಎಂಬ ಯೋಚನೆಯನ್ನು ನೀಡಿರುತ್ತಾರೆ.

ಹೇಳಿಕೆಯಂತೆ ಅ.6ರಂದು ಸಂಜೆ 3 ಗಂಟೆಗೆ ಸೋಣಂಗೇರಿ – ಕುಕ್ಕನ್ನೂರು ಭಾಗದ ಎಲ್ಲ ಯುವಕರು/ಯುವತಿಯರು/ಪುರುಷರು/ಮಹಿಳೆಯರು ಹಾಗೂ ಹಿರಿಯರು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಆಡಳಿತ ಮಂಡಳಿ ತಿಳಿಸಿದೆ.