ಬೆಳ್ಳಾರೆ ಕೆಪಿಎಸ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ “ನಶೆಯೆಂಬ ನರಕ” ಕಿರು ಚಿತ್ರದ ವೀಕ್ಷಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿ .ಸುಳ್ಯ ತಾಲೂಕು ಬೆಳ್ಳಾರೆ ವಲಯ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ ಬೆಳ್ಳಾರೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ಅ.01ರಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ಕೆಪಿಎಸ್ ಬೆಳ್ಳಾರೆ ಸಹಯೋಗ ದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ನಷೆಯೆಂಬ ನರಕ ಎಂಬ ಕಿರು ಚಿತ್ರದ ವೀಕ್ಷಣೆ ಮಾಡುವುದರ ಮೂಲಕ ಚಾಲನೆ ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಶಾಲಾ ಪ್ರಾಂಶುಪಾಲರಾದ ಜನಾರ್ಧನ್ ಕೆಎನ್ ವಹಿಸಿದ್ದರು.


ಮುಖ್ಯ ಅತಿಥಿಯಾಗಿ ವಿಶ್ವನಾಥ ರೈ ಕಳಂಜ ನಿಕಟ ಪೂರ್ವ ಅಧ್ಯಕ್ಷರು ಜನ ಜಾಗೃತಿ ವೇದಿಕೆ ಸುಳ್ಯ ತಾಲೂಕು,
ಶ್ರೀಮತಿ ವಿಶಾಲ ವಲಯ ಮೇಲ್ವಿಚಾರಕರು ಶ್ರೀ ಕ್ಷೇ. ಧ. ಗ್ರಾ. ಯೋಜನೆ, ಬಿಸಿ ಟ್ರಸ್ಟ್ ಬೆಳ್ಳಾರೆ ವಲಯ,
ಶ್ರೀಮತಿ ನಿರ್ಮಲಾ ಜಯರಾಮ್ ವಲಯ ಅಧಿಕಾರಿ ವಲಯ 15 ಜೆಸಿಐ ಭಾರತ,
ಶ್ರೀಮತಿ ವೇದ ಶೆಟ್ಟಿ ವಲಯ ಅಧ್ಯಕ್ಷರು ಪ್ರ. ಬ ಸ್ವ. ಸ ಗಳ ಒಕ್ಕೂಟ ಬೆಳ್ಳಾರೆ ವಲಯ
ಶ್ರೀಮತಿ ವೀಣಾ ಉಪಾಧ್ಯಕ್ಷರು ಪ್ರ. ಬ. ಸ್ವ. ಸ. ಗಳ ಒಕ್ಕೂಟದ ಬೆಳ್ಳಾರೆ
ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಶಾಲಾ ಮುಖಂಡರಾದ ದೀಕ್ಷಿತ್ ಮತ್ತು ಕುಮಾರಿ ಸಹನ ಉದ್ಘಾಟಿಸಿದರು.
ವಲಯ ಮೇಲ್ವಿಚಾರಕಿ ವಿಶಾಲರವರು ಪ್ರಾಸ್ರಾವಿಕ ಮಾತನಾಡಿ ಇಂದಿನ ಮಕ್ಕಳು, ದುಶ್ಚಟಕ್ಕೆ ಬಲಿಯಾಗದೆ ದೂರವಿದ್ದರೆ ಮುಂದಿನ ಪೀಳಿಗೆಯಲ್ಲಿ ದುಶ್ಚಟ ರಹಿತ ದೇಶವನ್ನಾಗಿ ಮಾಡಬಹುವುದು ಎಂದು
ಹೇಳಿದರು
ವಿದ್ಯಾರ್ಥಿಗಳಾದ ಶರಧಿ ಮತ್ತು ವಿಹಾರಿಕ ಪ್ರಾರ್ಥನೆಯನ್ನು ಮಾಡಿದರು.
ಅಮರ ಪಡ್ನರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿಯಾದ ದಿವ್ಯ ಇವರು ಸ್ವಾಗತಿಸಿದರು.
ಕೆಪಿಸಿ ಶಾಲಾ ರಾಜ್ಯಶಾಸ್ತ್ರ ಉಪನ್ಯಾಸಕರಾದ ಮಹೇಶ್ ವಂದಿಸಿದರು.
ಬೆಳ್ಳಾರೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ಹರಿಣಾಕ್ಷಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.