ಹಾಲೆಮಜಲು : ಸ್ವಚ್ಛತಾ ಕಾರ್ಯಕ್ರಮ

0


ಆದರ್ಶ ಯೂತ್ ಕ್ಲಬ್ ರಿ. ಹಾಲೆಮಜಲು ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಾಲೆಮಜಲು ಬಸ್ಸು ತಂಗುದಾಣ ಪುಸ್ತಕ ಗೂಡು, ಇದರ ಬಳಿಯಿಂದ ಹಿಡಿದು ರಸ್ತೆಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.


ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷ ಆಕಾಶ್ ಕುಳ್ಳಂಪಾಡಿ, ಕಾರ್ಯದರ್ಶಿ ಪ್ರಜ್ವಲ್ ಕುಂಬಡ್ಕ, ಖಜಾಂಜಿ ದೀಕ್ಷಿತ್ ಹಾಲೆಮಜಲು, ಪಂಜ ಪಂಚಶ್ರಿ ಜೆಸಿಯ ಪೂರ್ವಾಧ್ಯಕ್ಷ ಶಿವಪ್ರಸಾದ ಹಾಲೆಮಜಲು, ಸುಳ್ಯ ಯುವಜನ ಸಯುಕ್ತ ಮಂಡಳಿಯ ನಿರ್ದೇಶಕ ದಿನೇಶ್ ಹಾಲೆಮಜಲು, ಎಸ್ ಕೆ ಡಿ ಆರ್ ಡಿ ಪಿಯ ಸೇವಾ ಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ, ಸದಸ್ಯರುಗಳಾದ ಕುಸುಮಾದರ ಗುಡ್ಡೆಮನೆ, ಘೋಷಿತ್ ನರಿಯೂರು, ಪ್ರಕಾಶ್ ಕುಳ್ಳಂಪಾಡಿ, ಪುನೀತ್ ಹಾಲೆಮಜಲು, ಕಾರ್ತಿಕ್ ಆಮೆ, ಆದರ್ಶ್ ಕುಳ್ಳಂಪಾಡಿ ಸೇರಿದಂತೆ ಮತ್ತಿತರ ಸದಸ್ಯರು ಸ್ವಚ್ಛತೆಯಲ್ಲಿ ಸಹಕರಿಸಿದರು.