ಈಶ್ವರಡ್ಕ ಕುಟುಂಬದ ನಾಗನಕಟ್ಟೆಗೆ ಮುಹೂರ್ತ

0


ಸುಳ್ಯ ಗ್ರಾಮದ ದುಗ್ಗಲಡ್ಕ ಸಮೀಪದ ಈಶ್ವರಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನೂತನ ನಾಗನಕಟ್ಟೆಗೆ ಮುಹೂರ್ತ ಇಂದು ನಡೆಯಿತು.
ಅಡ್ಕಾರ್ ರಾಧಾಕೃಷ್ಣ ಆಚಾರ್ಯ ಇವರ ನೇತೃತ್ವದಲ್ಲಿ ದಾಮೋದರ ಮಣಿಯಾಣಿ ಮಾವಿನಕಟ್ಟೆ (ಮೇಸ್ತ್ರಿ ) ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಈಶ್ವರಡ್ಕ ಕುಟುಂಬದ ಹಿರಿಯರಾದ ಗೋಪಾಲ ಮಣಿಯಾಣಿ ಈಶ್ವರಡ್ಕ,ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶ್ರೀ ದುಗ್ಗಲಾಯ ದೈವಸ್ಥಾನದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಕಜೆ, ಗೌರವಾಧ್ಯಕ್ಷ ಸುಂದರ ರಾವ್, ಮಾಜಿ ಅಧ್ಯಕ್ಷ ದಯಾನಂದ ಸಾಲಿಯಾನ್,ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.