ಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ

0

ಸಾರಿಗೆ ಸಂಸ್ಥೆ ಅಧಿಕಾರಿ ಸುಳ್ಯದ ಕೆ.ಎಂ.ಅಶ್ರಫ್ ರವರಿಂದ ಪ್ರಶಸ್ತಿ ಸ್ವೀಕಾರ

ದೆಹಲಿ ಮೂಲದ ಪ್ರತಿಷ್ಠಿತ ಸ್ಕಾಚ್ ಸಂಸ್ಥೆಯ ನಿಗಮದ ನೌಕರರಿಗೆ ಹೃದಯ ಸಂಬಂಧಿ ಅರೋಗ್ಯ ತಪಾಸಣೆ ಮತ್ತು ಮುಂಜಾಗ್ರತಾ ವಹಿಸುವ ಉಪಕ್ರಮಗಳಿಗಾಗಿ ಸಾರಿಗೆ ಸಂಜೀವಿನಿ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದರ ಸಂಪೂರ್ಣ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸಿದಕ್ಕಾಗಿ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುತ್ತದೆ.


ಸ್ಕಾಚ್ ಸಂಸ್ಥೆಯು ತನ್ನ ಅತ್ಯುತ್ತಮ ಪ್ರಶಸ್ತಿ ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಪ್ರಶಸ್ತಿಯನ್ನು ನೀಡಲಾಗುವುದು
ಈ ಪ್ರಶಸ್ತಿಗೆ ಕರ್ನಾಟಕ ಸಾರಿಗೆ ಸಂಸ್ಥೆ ಆಯ್ಕೆಯಾಗಿದ್ದು.
ಇತ್ತೀಚೆಗೆ ದೆಹಲಿಯ ಇಂಡಿಯಾ‌ ಹ್ಯಾಬಿಟೇಟ್ ಸೆಂಟರ್ ನ ಸ್ವಿಲರ್ ಓಕ್ ಹಾಲ್ ನಲ್ಲಿ ಪ್ರಶಸ್ತಿ ಪಧಾನ ಸಮಾರಂಭ ನಡೆಯಿತು.


ಸ್ಕಾಚ್ ಗ್ರೂಪ್ ನ ಅಧ್ಯಕ್ಷ ಸಮೀರ್ ಕೊಚ್ಚರ್,ಉಪಾಧ್ಯಕ್ಷ ಡಾ.ಗುರುಚರಣ್ ಧನ್ಜಾಲ್ ರವರು ಪ್ರಶಸ್ತಿಯನ್ನು ನೀಡಿದರು
ಕೆ ಎಸ್ ಆರ್ ಟಿ‌ಸಿ‌ ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ ಟಿ,ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಸುಳ್ಯ ಗಾಂಧಿನಗರ ಮೂಲದ ಅಶ್ರಫ್ ಕೆ ಎಂ ರವರು ಪ್ರಶಸ್ತಿ ಸ್ವೀಕರಿಸಿದರು.