ಕನಕಮಜಲು : ಕನಕದಾಸ ಮಕ್ಕಳ ಭಜನಾ ಮಂಡಳಿಯ ವಾರ್ಷಿಕ ಸಂಭ್ರಮ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

0

ಕನಕದಾಸ ಮಕ್ಕಳ ಭಜನಾ ಮಂಡಳಿ (ರಿ), ಕನಕಮಜಲು ಇದರ ವಾರ್ಷಿಕ ಸಂಭ್ರಮ ಅ. 8ರಂದು ಕನಕಮಜಲಿನ ಮದಿಮಾಳು ಪಾದೆ ಶ್ರೀ ದುರ್ಗಾದೇವಿ ಅಮ್ಮನವರ ಸನ್ನಿಧಿಯಲ್ಲಿ ಜರುಗಲಿದ್ದು, ಆ ಪ್ರಯುಕ್ತ ತಂಡದ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಆ. 5 ರಂದು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರಿನ ಶ್ರೀಮತಿ ಸುಷ್ಮಾ ಮುರಳಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ಮಕ್ಕಳ ಪೋಷಕರಾದ ಶ್ರೀಮತಿ ಕುಸುಮಾವತಿ ಅಡ್ಕಾರು, ಶ್ರೀಮತಿ ಸೌಮ್ಯ ಪ್ರಶಾಂತ್ ಅಕ್ಕಿಮಲೆ, ಶ್ರೀಮತಿ ಸರಿತಾ ಪುತ್ತಿಲ, ಶ್ರೀಮತಿ ನೇತ್ರ ಅಡ್ಕಾರ್, ಶ್ರೀಮತಿ ಧರ್ಮಾವತಿ ಕುತ್ಯಾಳ ಹಾಗೂ ತೀರ್ಪುಗಾರರಾಗಿ ಸಹಕರಿಸಿದ ಕು. ಆಕಾಂಕ್ಷಾ ಕಜೆಗದ್ದೆ, ಕು. ಭಾನವಿಕೃಷ್ಣ, ಕು. ಸಮೀಕ್ಷ ಕುತ್ಯಾಳ, ಕು ಸಾನ್ವಿ ಅಕ್ಕಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಂಡದ ಎಲ್ಲಾ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವೇದಿಕೆಯನ್ನು ಸದುಪಯೋಗಪಡಿಸಿಕೊಂಡರು.