ಬೆಂಗಳೂರಿನಲ್ಲಿ ಇಂಟಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುರುಗನ್ ಅಡ್ಯಡ್ಕ ಅವರಿಗೆ ಸನ್ಮಾನ

0

ಇಂಟಕ್ ಕಾಂಗ್ರೆಸ್ ಬೆಂಗಳೂರು ಕೇಂದ್ರದ ಜಿಲ್ಲಾಧ್ಯಕ್ಷರಾದ ತೊಡಿಕಾನ ಗ್ರಾಮದ ಅಡ್ಯಡ್ಕದವರಾದ ಮುರುಗ‌ನ್ ಪಿ. ಅವರಿಗೆ ಬೆಂಗಳೂರಿನಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ಅ.5ರಂದು ಸನ್ಮಾನಿಸಿದರು.

ಈ ವೇಳೆ ಮುರುಗನ್ ಅವರು ಅರಣ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶಿರೂರು ಅವರ ಜೊತೆ ಅರಣ್ಯ ನಿಗಮದ ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಚರ್ಚಿಸಿದರು.

ಅರಣ್ಯ ಅಭಿವೃದ್ಧಿ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಲವು ಸಮಸ್ಯೆಯ ಕುರಿತಂತೆ ಮುರುಗನ್ ಅವರು ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರೊಂದಿಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಡಾ. ರಘು, ನ.ಪಂ. ಸದಸ್ಯರಾದ ರಿಯಾಜ್ ಕಟ್ಟೆಕ್ಕಾರ್, ಸಿದ್ಧೀಕ್ ಕೊಕ್ಕೊ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.