ಎಲಿಮಲೆ : ಸರಕಾರಿ ಪ್ರೌಢಶಾಲೆಯಲ್ಲಿ ಅಗ್ನಿ ಅವಘಡ ಮತ್ತು ವಿಕೋಪ ಸಿದ್ಧತೆ ಮಾಹಿತಿ‌ ಕಾರ್ಯಗಾರ

0

ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಅಗ್ನಿ ಅವಘಡ ಮತ್ತು ವಿಕೋಪದ ಸಿದ್ಧತೆ ಮಾಹಿತಿ ಕಾರ್ಯಗಾರವು ಆ.7ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಳ್ಯ ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ಅಧಿಕಾರಿಯಾದ ಆನಂದ್ ಮತ್ತು ಇತರ ಸಿಬ್ಬಂದಿ ವರ್ಗದವರು ನಡೆಸಿಕೊಟ್ಟರು.

ನಂತರ ಅಗ್ನಿಶಾಮಕ ದಳದವರ ವತಿಯಿಂದ ಅಗ್ನಿ ಅವಘಡದ ಪ್ರಾತ್ಯಕ್ಷಿಕೆ ಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳಾದ ಸಂಧ್ಯಾ, ಶಿಕ್ಷಕ ವೃಂದದವರು, ರಾಜ್ಯ ಪುರಸ್ಕಾರ ರೋವರ್ ಮತ್ತು ಸಾಂತೋಮ್ ವಿದ್ಯಾನಿಕೇತನ ರೆಂಜಿಲಾಡಿ ಇಲ್ಲಿಯ ಸ್ಕೌಟ್ ಮಾಸ್ಟರ್ ಆಗಿರುವ ವಿಶ್ವತ್ ಮತ್ತು ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿಯ ಸ್ಕೌಟ್ ಮಾಸ್ಟರ್ ಭರತ್ ನಾಯಕ್, ಸ್ಕೌಟ್ ಮತ್ತು ಗೈಡ್ಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು.