ಗಾಂಧಿನಗರ ಜುಮಾ ಮಸ್ಜಿದ್ ನಲ್ಲಿ ತಾಜುಲ್ ಉಲಮಾ ಹಾಗೂ ಅಗಲಿದ ಧಾರ್ಮಿಕ ನೇತಾರರ ಅನುಸ್ಮರಣೆ ಹಾಗೂ ದುವಾ ಮಜ್ಲಿಸ್

0

ಗಾಂಧಿನಗರ ಜುಮಾ ಮಸ್ಜಿದ್ ನಲ್ಲಿ ಅಗಲಿದ ಧಾರ್ಮಿಕ ನೇತಾರರ ಅನುಷ್ಮರಣೆ ಹಾಗೂ ದುವಾ ಮಜ್ಲಿಸ್ ಅ. 11 ರಂದು ನಡೆಯಿತು.

ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿ ರವರು ಕಾರ್ಯಕ್ರಮದ ನೇತೃತ್ವ ವಹಿಸಿ ದುವಾ ಮಜ್ಲಿಸ್ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ನಮ್ಮನ್ನು ಅಗಲಿರುವ ಧಾರ್ಮಿಕ ಪಂಡಿತರಗಳು ಆದರ್ಶ ಜೀವನವನ್ನು ಸಾಗಿಸಿದವರು.ದೀನಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದ ಮಹಾನರುಗಳಾದ ಖಾಝಿಯಾಗಿ ಸೇವೆಸಲ್ಲಿಸಿರುವ ಸಯ್ಯಿದ್ ತಾಜುಲ್ ಉಲಮಾ ತಂಙಳ್ ಹಾಗೂ ಸಂಶುಲ್ ಉಲಮಾ ತಂಙಳ್, ಕಣ್ಣಿಯತ್ ಉಸ್ತಾದ್, ನೂರುಲ್ ಉಲಮಾ ಎಂ ಎ ಉಸ್ತಾದ್, ನೆಲ್ಲಿಕುನ್ನ್ ಉಸ್ತಾದ್ ಹಾಗೂ ಇನ್ನಿತರ ಉಲಮಾ ನೇತಾರರು ಅಗಲಿದ ರಬಿಯುಲ್ ಆಖರ್ ತಿಂಗಳು ಇದಾಗಿದೆ ಎಂದು ಹೇಳಿದರು.

ಸಾಮೂಹಿಕ ಪ್ರಾರ್ಥನೆ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಜಮಾಅತ್ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಸಂಘ ಟನೆಗಳ ಮುಖಂಡರುಗಳು, ಕಾರ್ಯಕರ್ತರು,ಹಾಗೂ ನೂರಾರು ಮಂದಿ ಮುಸ್ಲಿಂ ಭಾಂದವರು ಭಾಗವಹಿಸಿದ್ದರು.