ಶಾರದಾಂಬ ದಸರಾ ಸಮಿತಿ ವತಿಯಿಂದ ಇಂದು ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನದ ಭೋಜನ

0

ಶ್ರೀ ಶಾರದಾಂಬ ದಸರಾ ಸಂದರ್ಭದ ಚಂಡಿಕಯಾಗದ ದಿನವಾದ ಇಂದು ಮಧ್ಯಾಹ್ನದ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯತೊಡಗಿದೆ.

ನಿನ್ನೆ ದೇವಸ್ಥಾನದಲ್ಲಿ ಎಲ್ಲಾ ಭಕ್ತರಿಗೆ ಊಟ ದೊರೆಯದೆ ಕೆಲವರು ಹಿಂತಿರುಗಿ ಹೋಗಬೇಕಾಗಿ ಬಂದ ಘಟನೆಯಿಂದ ಇಂದಿನಿಂದ ಮಧ್ಯಾಹ್ನವು ಭೋಜನ ನೀಡಲು ಶಾರದಾಂಬ ದಸರಾ ಸಮಿತಿ ನಿರ್ಧರಿಸಿತು.

ಈ ಹಿನ್ನಲೆಯಲ್ಲಿ ಸಮಿತಿಯ ಎಲ್ಲಾ ಮಹಿಳ ಮತ್ತು ಪುರುಷ ಪದಾಧಿಕಾರಿಗಳು ಅಡುಗೆ ತಯಾರಿಯ ಪ್ರಕ್ರಿಯೆ ತೊಡಗಿದರಲ್ಲದೆ ಸಾವಿರಾರು ಮಂದಿಗೆ ಊಟ ಬಡಿಸಿ ಸಂತೃಪ್ತಿ ಗೊಂಡರು.