ಸುಳ್ಯ ಶ್ರೀ ಶಾರದೋತ್ಸವದ ಶೋಭಾಯಾತ್ರೆ ವೇಳೆ ಸುಳ್ಯ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರದ ಬಗ್ಗೆ ಜಿಲ್ಲಾಧಿಕಾರಿ ಆದೇಶ

0

ಜಿಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ರವರ ನಡವಳಿಗಳು
ಅ. 17.ರಂದು ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ದಸರಾ ಉತ್ಸವ ನಮಿತಿ ವತಿಯಿಂದ 51ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಶ್ರೀ ಶಾರದಾ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡುವ ಬಗ್ಗೆ ಸೂಚಿಸಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:17.10.2024 ರಂದು ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ದಸರಾ ಉತ್ಸವ ಸಮಿತಿ ವತಿಯಿಂದ 51ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಶ್ರೀ ಶಾರದಾ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ವಿಸರ್ಜನಾ ಮೆರವಣಿಗೆಯು ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು ವಿವೇಕಾನಂದ ಸರ್ಕಲ್ – ಶ್ರೀ ರಾಮ್ ಪೇಟೆ – ಮೊಗರ್ವಣೆ – ಹಳೇಗೇಟ್ – ಒಡಬಾಯಿ ವೆಟ್ರೋಲ್ ಪಂವ್ ಬಳಿಯಿಂದ ವಾಪಾಸ್ಸು ಹಿಂತಿರುಗಿ ಜ್ಯೋತಿ ಸರ್ಕಲ್ – ಬಸ್ ನಿಲ್ದಾಣ – ಕಟ್ಟೆ ಜಂಕ್ಷನ್ – ಗಾಂಧಿನಗರ ತೆರಳಿ ಬಳಿಕ ರಥಬೀದಿಯಿಂದಾಗಿ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿರುವ ವಯಸ್ವಿನಿ ನದಿಯಲ್ಲಿ ವಿಸರ್ಜನೆ ನಡೆಯಲ್ಲಿರುತ್ತದೆ.

ಕಾರ್ಯಕ್ರಮದಲ್ಲಿ ಸುಮಾರು 3000-4000 ಜನ ನೇರುವ ನಿರೀಕ್ಷೆ ಇರುವುದರಿಂದ, ದಿನಾಂಕ:17.10.2024 ಸಂಜೆ 03.00 ಗಂಟೆಯಿಂದ ಮಧ್ಯರಾತ್ರಿವರೆಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ – 275 ರಲ್ಲಿ ಸಂಚರಿಸುವ ವಾಹನಗಳನ್ನು ಕಟ್ಟೆ ಜಂಕ್ಷನ್ ನಿಂದ – ವಿವೇಕಾನಂದ ಸರ್ಕಲ್ – ಕಾಂತಮಂಗಲ – ಅಜ್ಜಾವರ- ಪೇರಾಲು ಅಡ್ಕಾರ್ ಮಾರ್ಗವಾಗಿ ಅಡ್ಡಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ – 275 ನ್ನು ಸಂಪರ್ಕಿಸುವಂತೆ ಸೂಚಿಸಿ ಆದೇಶ ಹೊರಡಿಸಬೇಕಾಗಿ ಉಲ್ಲೇಖದಂತೆ ಉಪವಿಭಾಗಾಧಿಕಾರಿಗಳು, ಪುತ್ತೂರು ಉಪವಿಭಾಗ, ಪುತ್ತೂರು ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಈ ನಿಟ್ಟಿನಲ್ಲಿ ಮೋಟಾರು ಕಾಯಿದೆ 1988 ರ ಸೆಕ್ಷನ್ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ 1989 ನಿಯಮ 221(ಎ )(5)ರಡಿಯಲ್ಲಿ ಅಧಿಕಾರವನ್ನು ಚಲಾಯಿಸಿ ಶ್ರೀ ಶಾರದಾ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಸಾರ್ವಜನಿಕ ರ ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿ ಯಿಂದ ಅ 17 ರಂದು 3 ಘಂಟೆಯಿಂದ ಮಧ್ಯರಾತ್ರಿ ವರೆಗೆ ರಾಷ್ಟ್ರಿಯ ಹೆದ್ದಾರಿ 275 ರಲ್ಲಿ ಸಂಚರಿಸುವ ವಾಹನಗಳು ಕಟ್ಟೆ ಜಂಕ್ಷನ್ ನಿಂದ ವಿವೇಕಾನಂದ ಸರ್ಕಲ್, ಕಾಂತಮಂಗಲ ಅಜ್ಜಾವರ ಪೇರಾಲು ಅಡ್ಕಾರ್ ಮಾರ್ಗವಾಗಿ ಸಂಪರ್ಕ ಮಾಡುವಂತೆ ಸಂಚಾಲರ ಮಾರ್ಗ ಬದಲಾವಣೆ ಮಾಡಿ ಆದೇಶ ಮಾಡಿದ್ದಾರೆ.