ಸುಳ್ಯ ರೋಟರಿ ಕ್ಲಬ್ ವತಿಯಿಂದ ಕೊಡಿಯಾಲಬೈಲು ಪ್ರ.ದ. ಕಾಲೇಜಿನಲ್ಲಿ ರೋಡ್ ಸೇಫ್ಟಿ ಅವೇರ್ನೆಸ್ ಕಾರ್ಯಕ್ರಮ

0

ರೋಟರಿ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ
ರೋಡ್ ಸೇಫ್ಟಿ
ಅವೇರ್ನೆಸ್ ಕಾರ್ಯಕ್ರಮ
ಅ. 18ರಂದು ಸುಳ್ಯದ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತಾ ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.


ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟಿಸಲಾಯಿತು. ವೇದಿಕೆಯಲ್ಲಿದ್ದ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕೆ.ಆರ್ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ನ್ಯಾಯವಾದಿ ರೊ. ಸುಬ್ರಾಯ ಭಟ್ ದಳ ವಾಹನ ಚಲಾವಣೆಯ ಸಂದರ್ಭದ ಎಚ್ಚರಿಕೆ, ಕಾನೂನುಗಳ ಬಗ್ಗೆ ಅರಿವು ಬಗ್ಗೆ ಮಾಹಿತಿ ನೀಡಿದರು. ಯೂತ್ ಸರ್ವಿಸ್ ಡೈರೆಕ್ಟರ್ ರೊ. ಕಸ್ತೂರಿಶಂಕರ್ ಮತ್ತು ಉಪಾಧ್ಯಕ್ಷರಾದ ರೊ. ಡಾ ರಾಮ್ ಮೋಹನ್ ವಿದ್ಯಾರ್ಥಿಗಳಿಗೆ ಜೀವ- ಜೀವನದ ಎಚ್ಚರಿಕೆ ಮಾತುಗಳನ್ನು ತಿಳಿಸಿ ಶುಭ ಹಾರೈಸಿದರು. ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಲತಾ ಎಂ. ರೈಯವರು ಶುಭ ಹಾರೈಸಿದರು. ಕಾರ್ಯದರ್ಶಿ ರೊ. ಡಾ ಹರ್ಷಿತಾ ಪುರುಷೋತ್ತಮ್ ವಂದಿಸಿದರು. ವೇದಿಕೆಯಲ್ಲಿ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಉದಯಶಂಕರ್ ಹೆಚ್ ಉಪಸ್ಥಿತರಿದ್ದರು. ರೋಟರಿ ಸದಸ್ಯರುಗಳಾದ ರೊ. ಪ್ರಭಾಕರ ಸಿ.ಹೆಚ್ ಉಪಸ್ಥಿತರಿದ್ದರು.