ಕೆವಿಜಿ ಪಾಲಿಟೆಕ್ನಿಕ್ : “ವ್ಯಸನ ಮುಕ್ತ ಭಾರತ’ ಮಾಹಿತಿ ಕಾರ್ಯಕ್ರಮ

0

ವ್ಯಸನಗಳ ಮೊದಲ ಮೆಟ್ಟಿಲು ಮದ್ಯಪಾನ. ಮೊದಲ ಮೆಟ್ಟಿಲು ಜಾರಿದರೆ ಎಲ್ಲಾ ಮೆಟ್ಟಿಲುಗಳು ಜಾರಿದಂತೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯ ನಿಕಟ ಪೂರ್ವಾಧ್ಯಕ್ಷ ಭವಾನಿ ಶಂಕರ ಅಡ್ತಲೆ ಹೇಳಿದರು.


ಅವರು ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಸನಗಳು ಚಟವಲ್ಲ ಅದೊಂದು ಕಾಯಿಲೆ. ಆ ನಿಟ್ಟಿನಲ್ಲಿ ಹದಿಹರೆಯವು ಅಪಾಯಕಾರಿ ಘಟ್ಟವಾಗಿದ್ದು, ಯುವಕರು ಜಾಗೃತರಾಗಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆವಿಜಿ ಪಾಲಿಟೆಕ್ನಿಕ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ರಮಾದೇವಿ ವಹಿಸಿದ್ದರು.


ವೇದಿಕೆಯಲ್ಲಿ ಕೆವಿಜಿ ಪಾಲಿಟೆಕ್ನಿಕ್ ನ ಉಪನ್ಯಾಸಕಿ ಬಿಂದು ಕೆ.ವಿ., ಮರ್ಕಂಜ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸುನಿಲ್ ಅಡ್ತಲೆ, ಗೂನಡ್ಕ ಮಾರುತಿ ಸ್ಕೂಲ್ ನ ಶಿಕ್ಷಕಿ ವಾಣಿಶ್ರೀ, ಎನ್ನಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ , ಸುನಿಲ್ ಕುಮಾರ್ ಎನ್.ಪಿ ಮೊದಲಾದವರು ಉಪಸ್ಥಿತರಿದ್ದರು.