ಮಾ.4 ರಿಂದ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವರ ಜಾತ್ರೋತ್ಸವ

0

ಮಾ.6 ರಂದು ದರ್ಶನ ಬಲಿ ಬಟ್ಟಲು ಕಾಣಿಕೆ

ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಮಾ.4 ರಿಂದ 6 ರವರೆಗೆ ನಡೆಯಲಿದೆ.

ಮಾ.4 ರಂದು ಬೆಳಿಗ್ಗೆ ತೋರಣಮುಹೂರ್ತ, ಉಗ್ರಾಣಪೂಜೆ, ಹಸಿರುವಾಣಿ ಸಮರ್ಪಣೆ ನಡೆದು, ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯಕಲಶ ಮತ್ತು ಪಂಚಗವ್ಯ, ವಿಶೇಷ ಪೂಜೆ, ಶ್ರೀ ಶಾಸ್ತಾವು ಕ್ಷೇತ್ರದ ನಾಗನಕಟ್ಟೆ, ಮತ್ತು ಬೆಟ್ಟತೋಟದ ಚಿತ್ರಕೂಟದಲ್ಲಿ ಸಾನಿಧ್ಯ ಕಲಶ, ಪಂಚಗವ್ಯ ಮತ್ತು ತಂಬಿಲ ಸೇವೆ ನಡೆಯಲಿರುವುದು.

ಅದೇ ದಿನ ಸಂಜೆ ಊರಿನ ಅಂಗನವಾಡಿ ಮತ್ತು ಶಾಲಾಮಕ್ಕಳು ಹಾಗೂ ಗ್ರಾಮದ ಭಕ್ತಾಭಿಮಾನಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಮಾ.5 ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಸಂಜೆ ದೀಪಾರಾಧನೆ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮಗಳು, ಶ್ರೀ ಶಿವ ಸಾನಿಧ್ಯ ಮತ್ತು ಶ್ರೀ ನರಸಿಂಹ ಸಾನಿಧ್ಯ ಕಟ್ಟೆಗಳಲ್ಲಿ ಮಂಡಲ ಬರೆದು ಶಿವ ಪೂಜೆ ಮತ್ತು ನರಸಿಂಹ ದೇವರ ಪೂಜೆ, ಶ್ರೀ ದೇವಾಲಯದಲ್ಲಿ ರಾತ್ರಿ ಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಝೀ ಕನ್ನಡ, ಕಲರ್ಸ್ ಸೂಪರ್, ಸ್ಟಾರ್ ಪ್ಲಸ್ ಖ್ಯಾತಿಯ ತಂಡದಿಂದ ವೈವಿಧ್ಯಮಯ ನೃತ್ಯ, ಸ್ಟಾರ್ ನೈಟ್ ಗಳ ನೆಚ್ಚಿನ ಹಾಡುಗಾರರ ಸಮಾಗಮ ನೃತ್ಯ-ಗಾನ-ಸಂಗಮ ನಡೆಯಲಿದೆ.

ಮಾ.6 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಸಾನಿಧ್ಯಕಲಶ, ಸಾನಿಧ್ಯ ಕಲಶಾಭುಷೇಕ, ಮಹಾಪೂಜೆ ಶ್ರೀ ದೇವರ ಭೂತಬಲಿ, ದರ್ಶನ ಬಲಿ, ಬಟ್ಟಲುಕಾಣಿಕೆ, ರಾಜಾಂಗಣಪ್ರಸಾದ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ರಾತ್ರಿ ಅಲಂಕಾರ ಪೂಜೆ, ರಂಗಪೂಜೆ, ನಂತರ ಶ್ರೀ ರಕ್ತೇಶ್ವರಿ ದೈವದ ಸಾನಿಧ್ಯದಲ್ಲಿ ದೇವಕ್ರಿಯೆಯಲ್ಲಿ ಕೋಲ ನಡಾವಳಿ ನಡೆಯಲಿದೆ.