ಸಂಪಾಜೆ ವಲಯ ಕಾಂಗ್ರೆಸ್ ವಮಿತಿಯಿಂದ ಕಾಮಗಾರಿ ಪರಿಶೀಲನೆ
ಕೊಡಗು ಸಂಪಾಜೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರ ಅನುದಾನದಲ್ಲಿ ಕೊಯನಾಡು-ಕಲ್ಲಾಳ ರಸ್ತೆ ಅಭಿವೃದ್ಧಿಗೆ ರೂ 15 ಲಕ್ಷ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದ್ದು ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯವರು ವೀಕ್ಷಿಸಿ ಪರಿಶೀಲಿಸಿದರು.









ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ಕುಮಾರ್ ಕನ್ಯಾನ, ಗ್ರಾಮ ಪಂಚಾಯತ್ ಸದಸ್ಯ ಪಿ.ಎಲ್ ಸುರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಮೊಯಿದಿನ್ , ಯುವ ಮುಖಂಡ ಹನೀಫ್ ಎಸ್.ಪಿ, ಗ್ಯಾರಂಟಿ ಸಮಿತಿ ಸದಸ್ಯೆ ರಾಜೇಶ್ವರಿ ಕೆ.ಕೆ, ವಲಯ ಪ್ರಧಾನ ಕಾರ್ಯದರ್ಶಿ ರಿತಿನ್ ಡೆಮ್ಮಲೆ, ಹಾಗೂ ಕಲ್ಯಾಳ ಗ್ರಾಮಸ್ಥರು ಹಾಜರಿದ್ದರು.










