ಪ್ರವಾಹಕ್ಕೆ ಕೊಚ್ಚಿಹೋದ ಗ್ಯಾಸ್ ಸಿಲಿಂಡರ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಚೆಂಬುನಲ್ಲಿ ನಡೆದಿದೆ.
ಚೆಂಬುವಿನ ದಬ್ಬಡ್ಕದಲ್ಲಿ ಇತ್ತೀಚಿಗೆ ಬಂದ ಜಲ ಪ್ರವಾಹಕ್ಕೆ ಜಯಪ್ರಕಾಶ್ ಕಾಜಿಮಡ್ಕರವರ ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ನೆರೆಗೆ ಕೊಚ್ಚಿ ಹೋಗಿತ್ತು . ಮರುದಿನ ಅದು ಪೈಚಾರಿನ ಹೊಳೆಯಲ್ಲಿ ಪತ್ತೆಯಾಗಿ ಶೇಖಾಲಿ ಎಂಬವರಿಗೆ ಸಿಕ್ಕಿತು. ಸಿಲಿಂಡರ್ ಕೊಚ್ಚಿ ಹೋದ ಬಗ್ಗೆ ಜಯಪ್ರಕಾಶ್ ರವರು ಅರಂತೋಡು ತೆಕ್ಕಿಲ್ ಎಚ್.ಪಿ. ಗ್ಯಾಸ್ ವ್ಯವಸ್ಥಾಪಕರಾದ ಧನುರಾಜ್ ಊರುಪಂಜ ರವರಿಗೆ ಮಾಹಿತಿ ನೀಡಿದರು. ಅವರು ತಮ್ಮ ಸಂಸ್ಥೆಯ ಡೆಲಿವರಿ ಮ್ಯಾನ್ ಗಳ ಮೂಲಕ ಮಾಹಿತಿಯನ್ನು ನೀಡಿ ಅದರಂತೆ ಪೈಚಾರಿನ ಶೇಖಾಲಿಯವರಿಗೆ ಸಿಕ್ಕಿದ ಬಗ್ಗೆ ತಿಳಿಯಿತು. ಕೂಡಲೆ ಪೈಚಾರಿಗೆ ತಮ್ಮ ಸಿಬ್ಬಂದಿ ಹನೀಫ್ ಮೊಟ್ಟೆಂಗಾರ್ ರವರನ್ನು ಕಳುಹಿಸಿ ಸಿಲಿಂಡರನ್ನು ಅರಂತೋಡಿಗೆ ತಂದು ವಾರೀಸುದಾರರಾದ ಜಯಪ್ರಕಾಶ್ ಕಾಜಿಮಡ್ಕರವರಿಗೆ ಎಂಬವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು.