ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣ ಕುಮಾರ್ ಕೇವಳ ನಿವೃತ್ತಿ

0

ರಾಷ್ಟ್ರೀಯ ಹೆದ್ದಾರಿ ಉಪವಿಭಾಗ,ಮಂಗಳೂರು ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣ ಕುಮಾರ್ ಕೇವಳ ಆ. 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಮಡಪ್ಪಾಡಿ ಗ್ರಾಮದ ಕೇವಳ ಪಟೇಲ್ ಕುಶಾಲಪ್ಪ ಗೌಡ ಮತ್ತು ಶ್ರೀಮತಿ ತೇಜಾವತಿ ದಂಪತಿಯ ಪುತ್ರನಾಗಿ ಜನಿಸಿದ ಕೃಷ್ಣಕುಮಾರ್ ರವರು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮ,ಮೈಸೂರು ಓಪನ್ ಯುನಿವರ್ಸಿಟಿಯಲ್ಲಿ ಬಿ.ಟೆಕ್ ಪದವಿಯನ್ನು ಪೂರೈಸಿರುತ್ತಾರೆ.

1986ರಲ್ಲಿ ನೇಮಕಾತಿ ಹೊಂದಿ ಕಿರಿಯ ಇಂಜಿನಿಯರ್ ಆಗಿ ಸಣ್ಣ ನೀರಾವರಿ ವಿಭಾಗ ಮಂಗಳೂರು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾದರು.ಆ ಬಳಿಕ ಬಂಟ್ವಾಳ, ಪುತ್ತೂರು, ಮಂಗಳೂರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. 2018 ರಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಭಡ್ತಿ ಹೊಂದಿ ಸಣ್ಣ ನೀರಾವರಿ ಉಪವಿಭಾಗ ಮಂಗಳೂರು ಇಲ್ಲಿ 2020ರವರೆಗೆ ಸೇವೆ ಸಲ್ಲಿಸಿ ನಂತರ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಮಂಗಳೂರು ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯನ್ನು ಅಲಂಕರಿಸಿ ಆ.30ರಂದು ಸೇವೆಯಿಂದ ನಿವೃತ್ತಿ ಹೊಂದಿದರು.
ಮಂಗಳೂರಿನಲ್ಲಿ ನೆಲೆಸಿರುವ ಕೃಷ್ಣ ಕುಮಾರ್ ಕೇವಳರವರ ಪತ್ನಿ ಶ್ರೀಮತಿ ಭವಾನಿ ಗೃಹಿಣಿಯಾಗಿದ್ದು,ಪುತ್ರಿ ಶೀಮತಿ ಪೂಜಾ ಕೇವಳ ಬೆಂಗಳೂರಿನ ಐ.ಟಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಳಿಯ ಮನೀಶ್ ರವರೂ ಐ.ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ,ಎರಡನೇ ಮಗಳು ಡಾ. ಪ್ರಜ್ಞಾ ಕೇವಳ ಎಂ.ಬಿ.ಬಿ.ಎಸ್.ಪದವಿಯನ್ನು ಮುಗಿಸಿರುತ್ತಾರೆ.