ಗೌಡರ ಯುವ ಸೇವಾ ಸಂಘದಿಂದ ದಿ.ಕೋಡಿ ಕುಶಾಲಪ್ಪ ಗೌಡ ಹಾಗೂ ದಿ.ಗಾಂಧಿಪ್ರಸಾದ್‌ರಿಗೆ ಶ್ರದ್ಧಾಂಜಲಿ

0

ಸೆ.2 ರಂದು ನಿಧನರಾದ ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡ ಹಾಗೂ ಇಂದು ನಿಧನರಾದ ಪೆರಾಜೆ ಗ್ರಾ.ಪಂ. ಸದಸ್ಯ ಗಾಂಧಿಪ್ರಸಾದ್ ಬಂಗಾರಕೋಡಿ ಅವರಿಗೆ ಗೌಡರ ಯುವ ಸೇವಾ ಸಂಘದಿಂದ ಶ್ರದ್ಧಾಂಜಲಿ ಸಭೆಯು ಇಂದು ಮೊಗರ್ಪಣೆಯ ವೆಂಕಟ್ರಮಣ ಸೊಸೈಟಿಯ ಪ್ರಧಾನ ಕಚೇರಿ ಬಳಿ ಇರುವ ದಿ.ಮದುವೆಗದ್ದೆ ಸಭಾಂಗಣದಲ್ಲಿ ನಡೆಯಿತು.


ನಿವೃತ್ತ ಪ್ರಾಂಶುಪಾಲ ಎನ್.ಎ.ಜ್ಞಾನೇಶ್ ನುಡಿನಮನ ಸಲ್ಲಿಸಿದರು. ಅಧ್ಯಕ್ಷತೆಯನ್ನು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರು ವಹಿಸಿದ್ದರು. ಈ ಸಂದರ್ಭದಲ್ಲಿ ಗೌಡ ಯುವ ಸೇವಾ ಸಂಘದ ಉಪಾಧ್ಯಕ್ಷ ದಾಮೋದರ ನಾರ್ಕೋಡು, ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ವೆಂಕಟ್ರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್, ಪಿ.ಎಸ್.ಗಂಗಾಧರ, ಪುರುಷೋತ್ತಮ ಅಮೈ, ವೆಂಕಟ್ರಮಣ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ದೊಡ್ಡಣ್ಣ ಬರಮೇಲು, ಸಾಹಿತಿ ಎ.ಕೆ.ಹಿಮಕರ, ತಿಮ್ಮಯ್ಯ ಗೌಡ, ಮತ್ತಿತರರು ಉಪಸ್ಥಿತರಿದ್ದರು.