ಪ್ರಾಮಾಣಿಕತೆ ಮೆರೆದ ಲೋಕಯ್ಯ ನಾಯ್ಕ ಬೊಳಿಯೂರು .

0

 

 


ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರು,ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಲೋಕಯ್ಯ ನಾಯ್ಕ ಬೋಳಿಯೂರು ಈ ದಿನ ಮುಂಜಾನೆ ಪಂಚಾಯತ್ ಸದಸ್ಯರ ತರಬೇತಿಗೆ ಸುಳ್ಯಕ್ಕೆ ತೆರಳುತ್ತಿರುವಾಗ ಬೇಂಗಮಲೆಯಲ್ಲಿ ಕಡಬ ತಾಲೂಕಿನ ಶಿವಪ್ರಸಾದ್ ಮುಜೂರು ಸುಂಕದಕಟ್ಟೆ ಇವರ ನಗದು ಸಹಿತ ಖಾಸಗಿ ದಾಖಲೆಗಳನ್ನು ಒಳಗೊಂಡ ಪರ್ಸ್ ರಸ್ತೆಯಲ್ಲಿ ಸಿಕ್ಕಿದ್ದು, ಆ ಬಳಿಕ ಅವರನ್ನು ಸಂಪರ್ಕಿಸಿ ಈ ದಿನ ಸಂಜೆ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪ್ರಾಮಾಣಿಕತೆಯಿಂದ ಹಿಂತಿರಿಗಿಸಿದ್ದಾರೆ.