ಹರಿಹರ: ಹರಿಹರೇಶ್ವರ ಕ್ಷೇತ್ರದಲ್ಲಿ ಮೃತ್ತಿಕಾ ಸಂಗ್ರಹ

0

 

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಹಮ್ಮಿಕೊಂಡ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನದ ಕೆಂಪೇಗೌಡ ರಥ ಯಾತ್ರೆಯ ಮೃತ್ತಿಕೆ ಸಂಗ್ರಹ ನ .1ರಂದು ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ನಡೆಯಿತು.


ರಥವನ್ನು ಹರಿಹರ ಗ್ರಾಮ ಪಂಚಾಯತ್ ಹಾಗೂ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವತಿಯಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

 

ಈ ಭಾಗದಿಂದ ಸಂಗ್ರಹಿಸಲಾದ ಪವಿತ್ರ ಮೃತ್ತಿಕೆಗೆ ಕ್ಷೇತ್ರದ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಪಿಡಿಓ ಮಣಿಯಾನ ಪುರುಷೋತ್ತಮ, ಪಂಚಾಯತ್ ಅಧ್ಯಕ್ಷ ಜಯಂತ ಬಾಳುಗೋಡು ಹಾಗೂ ಸದಸ್ಯರು, ಸಂಜೀವಿನಿ ಒಕ್ಕೂಟ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಕೊಲ್ಲಮೊಗ್ರ ಪಂಚಾಯತ್ ನ ಉಪಾಧ್ಯಕ್ಷರಾದ ಜಯಶ್ರೀ ಚಾಂತಲ ಹಾಗೂ ಸದಸ್ಯರು,ಸ್ಥಳಿಯ ಜನಪ್ರತಿನಿಗಳು, ಪಂ ಸಿಬ್ಬಂದಿಗಳು,ಊರವರು ಹಾಜರಿದ್ದರು.

ವರದಿ: ಕುಶಾಲಪ್ಪ ಕಾಂತುಕುಮೇರಿ