ಗುತ್ತಿಗಾರು : ಗಾನಯಾನ – ಗೀತಗಾಯನ ಕಾರ್ಯಕ್ರಮ

0

ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲ್ಲೂಕು ಘಟಕ, ಸುಳ್ಯ ಸುವಿಚಾರ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ ಸಂಭ್ರಮ -2022 ರ ಅಂಗವಾಗಿ ಭಾವನ ಸುಗಮ ಸಂಗೀತ ಬಳಗದಿಂದ ಗುತ್ತಿಗಾರು ಸ ಪ ಪೂ ವಿದ್ಯಾಲಯದಲ್ಲಿ ಗಾನಯಾನ ಗೀತ ಗಾಯನ ಕಾರ್ಯಕ್ರಮ ನ.2 ರಂದು ನಡೆಯಿತು.


ಅಧ್ಯಕ್ಷತೆಯನ್ನು ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ ಡಿ.ಆರ್. ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪನ್ಯಾಸಕಿ ಜಕಿನಾ, ಪ್ರಭಾರ ಮುಖ್ಯಶಿಕ್ಷಕ ನೆಲ್ಸನ್ ಕ್ಯಾಸೋಲಿನೊ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ರಾಮಚಂದ್ರ ಪಲ್ಲತ್ತಡ್ಕ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ತೇಜಸ್ವಿ ಕಡಪಳ, ಕಾರ್ಯಕ್ರಮ ಸಂಯೋಜಕ ಕನ್ನಡ ಸಾಹಿತ್ಯ ಪರಿಷತ್ ನ ನಿರ್ದೇಶಕ ಯೋಗೀಶ್ ಹೊಸೊಳಿಕೆ ಉಪಸ್ಥಿತರಿದ್ದರು.


ಉದ್ಘಾಟನೆಯ ಬಳಿಕ ಭಾವನ ಸುಗಮ ಸಂಗೀತದ ಸುಳ್ಯದ ಅಧ್ಯಕ್ಷ ಗಾಯಕ ಕೆ.ಆರ್. ಗೋಪಾಲಕೃಷ್ಣ ಮತ್ತು ನೇಸರ ಕಲಾತಂಡ ಮೇದಿನಡ್ಕದ ಗಾಯಕ ರಮೇಶ್ ಮೆಟ್ಟಿನಡ್ಕ ರವರು ಗೀತ ಯಾನ- ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯಶಿಕ್ಷಕ ನೆಲ್ಸನ್ ಕ್ಯಾಸ್ಟೋಲಿನೋ ಸ್ವಾಗತಿಸಿ, ಶಿಕ್ಷಕ ರಂಜಿತ್ ವಂದಿಸಿದರು. ಶಿಕ್ಷಕಿ ಜೀವಿತ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.