ವಿ.ಆರ್.ಡಬ್ಲ್ಯೂ ರಾಜೇಶ್ವರಿ ಬೊಳುಬೈಲು ರವರಿಗೆ ಶ್ರದ್ಧಾಂಜಲಿ ಸಭೆ

0

ಕೆಲ ದಿನಗಳ ಹಿಂದೆ ನಿಧನರಾದ ಪಂಚಾಯತ್ ವಿ.ಆರ್.ಡಬ್ಲ್ಯೂ ರಾಜೇಶ್ವರಿ ಅವರ ಶ್ರದ್ಧಾಂಜಲಿ ಸಭೆ ಮತ್ತು ತಾಲ್ಲೂಕಿನ ಎಲ್ಲ ಪಂಚಾಯತ್ ಗಳ ಎಂ.ಆರ್. ಡಬ್ಲ್ಯೂ, ಯು.ಆರ್. ಡಬ್ಲ್ಯೂ, ವಿ.ಆರ್.ಡಬ್ಲ್ಯೂ ರವರ ಪ್ರಗತಿ ಪರಿಶೀಲನೆ ಸಭೆ ಸುಳ್ಯ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನ.7ರಂದು ನಡೆಯಿತು.

ಸಿ.ಡಿ.ಪಿ.ಓ ರಶ್ಮಿ ಅಶೋಕ್ ನೆಕ್ರಾಜೆ, ನೋಡೆಲ್ ಅಧಿಕಾರಿ ಶೈಲಜಾ, ತಾಲ್ಲೂಕು ಪಂಚಾಯತ್ ಮೆನೇಜರ್ ಹರೀಶ್ ಉಪಸ್ಥಿತರಿದ್ದರು. ಎಂ.ಆರ್..ಡಬ್ಲ್ಯೂ ಚಂದ್ರಶೇಖರ್ ಸ್ವಾಗತಿಸಿ, ನಗರ ಪಂಚಾಯತ್ ನ ಯು.ಆರ್. ಡಬ್ಲ್ಯೂ ಪ್ರವೀಣ್ ನಾಯಕ್ ವಂದಿಸಿದರು. ವಿ.ಆರ್.ಡಬ್ಲ್ಯೂ ಪುಟ್ಟಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತರ ಎಲ್ಲಾ ವಿ.ಆರ್. ಡಬ್ಲ್ಯೂ ರವರು ಹಾಜರಿದ್ದರು.