ಮುರ್ಕೆತ್ತಿ :ಸಹಕಾರಿ ಸಂಘ ನಿರ್ದೆಶಕ ಲಕ್ಷ್ಮಣ ಅವರಿಗೆ ಅಭಿನಂದನೆ

0

ಪೆರುವಾಜೆ ವಾರ್ಡ್ 3 ಕಾಂಗ್ರೆಸ್ ಸಮಿತಿಯ ಸಭೆ ನವೆಂಬರ್ 6 ರಂದು ಮುರ್ಕೆತ್ತಿ ತ್ರೀವೇಣಿ ನಗರದಲ್ಲಿ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳ್ಳಾರೆ ಸಹಕಾರಿ ಸಂಘದ ನಿರ್ದೇಶಕ ರಾಗಿ ಆಯ್ಕೆ ಯಾದ ಮುರ್ಕೆತ್ತಿ ವಾರ್ಡ್ ನ ದುರ್ಗಾ ನಗರದ ಲಕ್ಷ್ಮಣ ಇವರನ್ನು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾದ ವೆಂಕಪ್ಪ ಗೌಡ ನಾರ್ಕೊಡು ಶಾಲು ಹಾಕಿ ಅಭಿನಂದಿಸಿದರು.

ವಾರ್ಡ್ ನಲ್ಲಿ ಕುಡಿಯುವ ನೀರಿನ ಜಲಜೀವನ್ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಇದರಿಂದ ಜನತೆಗೆ ತುಂಬಾ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾಯಿತು. ವಾರ್ಡ್ 3 ರ ಸಂಪರ್ಕ ರಸ್ತೆ ಗಳಾದ ದುರ್ಗಾ ನಗರ — ಕೊಲ್ಯ ರಸ್ತೆ, ನಾಗನ ಮಜಲು, ಆಲಂತಡ್ಕ, ಶಾಂತಿ ಮೂಲೆ ರಸ್ತೆ ಅಭಿವೃದ್ಧಿ ಆಗದೇ ಸಂಚಾರ ಕ್ಕೆ ತೊಂದರೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರಲು ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ಅವರಿಗೆ ಜವಾಬ್ದಾರಿ ನೀಡಲಾಯಿತು.ಪಾಲ್ತಾಡು ಮುರ್ಕೆತ್ತಿ ಸಂಪರ್ಕ ರಸ್ತೆ ಅಗಲ ಗೊಳಿಸಿ ಕಾಂಕ್ರೀಟ್ ಕರಣ ಕಾಮಗಾರಿ ಶೀಘ್ರ ಆರಂಭ ಗೊಳ್ಳಲಿದೆ ಇದಕ್ಕೆ ಅನುದಾನ ನೀಡಲು ಕಾರಣೀಕರ್ತರಾದ ಮಂಜುನಾಥ ಭಂಡಾರಿ ಅವರು ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದು ಸಚಿನ್ ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಲಕ್ಷ್ಮಣ, ಸುಳ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಜಯ ದುರ್ಗಾ ನಗರ, ಅಬೂಬಕ್ಕರ್, ಹುಕ್ರಪ್ಪ ದುರ್ಗಾ ನಗರ, ಶಮೀರ್ ಮುರ್ಕೆತ್ತಿ , ದೀನೇಶ, ಶರೀಫ್ ಚೆನ್ನಾವರ,ಮೂಸಾ ಮುರ್ಕೆತ್ತಿ, ಪ್ರಶಾಂತ್ ರೈ ಬಜ ಮತ್ತಿತರರು ಉಪಸ್ಥಿತರಿದ್ದರು.
ವಾರ್ಡ್ ಪ್ರಧಾನ ಕಾರ್ಯದರ್ಶಿ ಕರುಣಾಕರ ದುರ್ಗಾ ನಗರ ಕಾರ್ಯಕ್ರಮ ನಿರೂಪಿಸಿದರು.