ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ್ಥ ಕ್ಯಾಪ್ ಬಿಡುಗಡೆ

0

ಡಿ.೧೦ರಂದು ಸಜ್ಜನ ಸಭಾ ಭವನ ಬೀಜದಕಟ್ಟೆ, ಗೂನಡ್ಕದಲ್ಲಿ ನಡೆಯಲಿರುವ ಸುಳ್ಯ ತಾಲ್ಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ್ಥ ಕ್ಯಾಪ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ಕರ್ನಾಟಕ ಹೈಕೋರ್ಟ್ ನ್ಯಾಯವಾದಿಗಳು ಹಾಗೂ ಸಾಹಿತಿಗಳಾದ ಶಂಕರಪ್ಪ ಬೆಂಗಳೂರು ಹಾಗೂ ಕಾವ್ಯ ನಾಡೋಜ ಸಾಹಿತಿ ಬಿ.ವಿ ಸತ್ಯನಾರಾಯಣ ರಾವ್ ಬೆಂಗಳೂರು ಇವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಮತ್ತು ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದರು