ದೊಡ್ಡೇರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ದೊಡ್ಡೇರಿ ಸ.ಕಿ.ಪ್ರಾ.ಶಾಲೆ ಹಾಗೂ ನವಜ್ಯೋತಿ ಕಲಾ ಮತ್ತು ಕ್ರೀಡಾ ಸಂಘದ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಹಾಗೂ ಊರವರಿಗೆ ಹಲವು ಕ್ರೀಡಾಕೂಟಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಡಿ.ಕೆ., ನವಜ್ಯೋತಿ ಕಲಾ ಮತ್ತು ಕ್ರೀಡಾ ಸಂಘದ ಸ್ಥಾಪಕಾಧ್ಯಕ್ಷ ವಾಸುದೇವ ನಾಯ್ಕ, ದೊಡ್ಡೇರಿ ಶ್ರೀ ಕ್ಷೇತ್ರ ಧ.ಗಾ.ಯೋಜನೆ ಒಕ್ಕೂಟದ ಅಧ್ಯಕ್ಷ ಸುಧೀರ್ ಕಾಂತಮಂಗಲ, ದೊಡ್ಡೇರಿ ವನದುರ್ಗಾ ಭಜನಾ ಮಂದಿರದ ಅಧ್ಯಕ್ಷ ಹರ್ಷಿತ್ ದೊಡ್ಡೇರಿ, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಾನಂತ ಸರಲಾಯ, ವಿದ್ಯಾರ್ಥಿ ನಾಯಕ ಮೋಕ್ಷಿತ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಕೃಷ್ಣಾನಂತ ಸರಲಾಯ ಸ್ವಾಗತಿಸಿದರು. ಜಗದೀಶ್ ದೊಡ್ಡೇರಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.