ಉಬರಡ್ಕಮಿತ್ತೂರು: ಕೊಂಬೋಟು ತರವಾಡು ಮನೆಯಲ್ಲಿಸತ್ಯನಾರಾಯಣ ಪೂಜೆ ಹಾಗೂ ಶ್ರೀಮೂಕಾಂಬಿಕಾ ಗುಳಿಗ, ಪಾಷಾಣಮೂರ್ತಿ ದೈವಗಳ ನೇಮೋತ್ಸವ

0

ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಕೊಂಬೋಟು ತರವಾಡು ‌ಮನೆಯಲ್ಲಿ ಡಿ. 6
ರಂದು ಬೆಳಗ್ಗೆ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನೆರವೇರಿತು.


ಮಧ್ಯಾಹ್ನಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಿತು. ಸಂಜೆ ಶ್ರೀ ದೈವಗಳ ಭಂಡಾರ ತೆಗೆದು ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಗಿ ಶ್ರೀ ಗುರು ಕಾರ್ನೋರು ದೈವದ ಕೋಲವಾಗಿ ನಂತರ ಶ್ರೀಮೂಕಾಂಬಿಕಾ ಗುಳಿಗ ದೈವದ ಮತ್ತು ಜೋಡುಪಾಷಾಣಮೂರ್ತಿ ದೈವಗಳ ಕೋಲವು ಜರುಗಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ರಾತ್ರಿ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯಾಯಿತು.

ಈ ಸಂದರ್ಭದಲ್ಲಿ ಕೊಂಬೋಟು ತರವಾಡು ಮನೆಯ ಕುಟುಂಬದ ಹಿರಿಯ ಕಿರಿಯ ಸದಸ್ಯರು ಭಾಗವಹಿಸಿದರು. ಊರ ಪರ ಊರಿನ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.