ಜ.29ರಂದು ದುಗ್ಗಲಡ್ಕದಲ್ಲಿ ಮಿತ್ರ-ಕುರಲ್ ಸಾಂಸ್ಕೃತಿಕ ಉತ್ಸವ
ಆಮಂತ್ರಣ ಪತ್ರ ಬಿಡುಗಡೆ

0


ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಜ.29ರಂದು ದುಗ್ಗಲಡ್ಕ ಪ್ರೌಢ ಶಾಲಾ ವಠಾರದಲ್ಲಿ ನಡೆಯುವ ಮಿತ್ರ-ಕುರಲ್ ಸಾಂಸ್ಕೃತಿಕ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಡಿ.18ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.
ಪ್ರಗತಿ ಪರ ಕೃಷಿಕ ಗಿರಿಧರ ಗೌಡ ನೆಕ್ರಾಜೆ ಆಮಂತ್ರಣ ಬಿಡುಗಡೆ ಮಾಡಿದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಅಧ್ಯಕ್ಷೆ ನವ್ಯದಿನೇಶ್ ಕೊಯಿಕುಳಿ, ಕಾರ್ಯದರ್ಶಿ ಮನೋಜ್ ಪಾನತ್ತಿಲ, ಯುವಕ ಮಂಡಲದ ಅಧ್ಯಕ್ಷ ಚೇತನ್ ಕಲ್ಮಡ್ಕ,ಕಾರ್ಯದರ್ಶಿ ಪ್ರದೀಪ್ ಕೊಯಿಕುಳಿ, ಚಂದ್ರಶೇಖರ ಗೌಡ ಮದಕ,ಮಾಜಿ ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಧನಂಜಯ ಕಲ್ಮಡ್ಕ, ಲಿಂಗಪ್ಪ ಮೂಡೆಕಲ್ಲು, ಕೆ.ಟಿ.ಭಾಗೀಶ್,ದಿನೇಶ್ ಮೂಡೆಕಲ್ಲು, ಇಬ್ರಾಹಿಂ ನೀರಬಿದಿರೆ, ಕೃಷ್ಣ ಸ್ವಾಮಿ ಕಂದಡ್ಕ,ವಾರಿಜಕೊರಗಪ್ಪ ಕೊಯಿಕುಳಿ, ಚಿದಾನಂದ ಕೊಯಿಕುಳಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.


ಜ.29ರ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಧ್ಯಾಹ್ನ 2.30ರಿಂದ ಉದ್ಘಾಟನಾ ಕಾರ್ಯಕ್ರಮ, ಬಳಿಕ ಅಂಗನವಾಡಿ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಸಾಹಿತ್ಯ ಕಲಾ ಕೇಂದ್ರ ಸುಳ್ಯ ಇವರಿಂದ ಸಂಗೀತ ರಸ ಸಂಜೆ, ಸುಳ್ಯದ ರಂಗಮಯೂರಿ ಕಲಾ ಶಾಲೆ ಇವರಿಂದ ನೃತ್ಯ ವೈಭವ,ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಚಾ ಪರ್ಕ ಕಲಾವಿದರಿಂದ ದೇವದಾಸ್ ಕಾಪಿಕಾಡ್ ನಿರ್ದೇಶನದ ನಾಯಿದ ಬೀಲ ತುಳು ಹಾಸ್ಯಮಯ ನಾಟಕ ನಡೆಯಲಿದೆ.