ಬಜಪ್ಪಿಲ ಉಳ್ಳಾಕುಲು ಕ್ಷೇತ್ರದಲ್ಲಿ ದೈವಗಳ ತೊಡಕ ಜಾತ್ರೆ, ದ.28ರಂದು ಧೂಮವತಿ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಉಳ್ಳಾಕುಲು, ಶ್ರೀ ಧೂಮವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಡಿ.27 ಶ್ರೀ ದೈವಗಳ ತೊಡಕ (ಕಾಲಾವಧಿ) ಜಾತ್ರೆ ಬಜಪ್ಪಿಲ ದೈವಸ್ಥಾನದಲ್ಲಿ ಆರಂಭಗೊಂಡಿದೆ.


ದ.26ರಂದು ದೈವಗಳಿಗೆ ಕೂಡಿ, ದ.
27ರಂದು ಉಳ್ಳಾಕುಲು ದೈವಗಳ ನೇಮೋತ್ಸವ, ನಡೆಯಿತು. ಊರ ಹಾಗೂ ಪರವೂರ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ದ.28ರಂದು ಧೂಮವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದು. ಊರ ಹಾಗೂ ಪರವೂರ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸುವಂತೆ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಹೇಮಂತ್ ಕುಮಾರ್ ಗೌಡರಮನೆ ತಿಳಿಸಿದ್ದಾರೆ
.