ಎ.ಎಸ್.ಐ. ರಾಮಕೃಷ್ಣ ಆಳಂಕಲ್ಯ‌ ನಿಧನ

0

ಮಂಗಳೂರು ಸಶಸ್ತೃ ಮೀಸಲು ಪಡೆಯಲ್ಲಿ ಎ.ಎಸ್.ಐ. ಆಗಿರುವ, ಮಂಡೆಕೋಲು ಗ್ರಾಮದ ಪೇರಾಲು ಆಲಂಕಳ್ಯ ರಾಮಕೃಷ್ಣ ಎಂಬವರು ನಿಧನರಾಗಿದ್ದಾರೆ.

ಮಂಗಳೂರಿನ ಅವರ ವಸತಿಗೃಹದಲ್ಲಿ ಅವರು ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಅವರ ಮನೆಯವರಿಗೆ ವಿಷಯ ಗೊತ್ತಾಗಿ ಮನೆಯವರು ಮಂಗಳೂರಿಗೆ ತೆರಳಿದ್ದಾರೆ.
ಮನೆಯವರು ಮಂಗಳೂರಿಗೆ ತೆರಳಿದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತೆಂದು ಅಲ್ಲಿ ಪೋಸ್ಟ್ ಮಾರ್ಟಂ ಆಗಿ ಮೃತದೇಹವನ್ನು ಆಲಂಕಲ್ಯಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಹಾಗೂ ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.