ಪೆರಾಜೆ: ಪೀಚೆಮನೆ ತರವಾಡು ಕುಟುಂಬದ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ

0

ಪೆರಾಜೆ ಗ್ರಾಮದ ಪೀಚೆಮನೆ ಕುಟುಂಬದ ತರವಾಡು ಮನೆಯಲ್ಲಿ ಅಷ್ಟ ನಾಗ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಡಿ.26 ರಂದು ನಡೆಯಿತು. ಬೆಳಗ್ಗೆ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಿಸಲಾಯಿತು. ಪೀಚೆಮನೆ ಕುಟುಂಬದ ಹಿರಿಯ ಕಿರಿಯ ಸದಸ್ಯರು ‌ಭಾಗವಹಿಸಿದರು.