ಉದ್ದಂತಡ್ಕ ಅಂಗನವಾಡಿ ಕೇಂದ್ರದಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ

0

ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ ಉದ್ದಂತಡ್ಕ ಅಂಗನವಾಡಿ ಕೇಂದ್ರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮ ಪಂಚಾಯಿತಿಯ ಸದಸ್ಯರಾದ ವಿಶ್ವನಾಥ ಮುಳ್ಯ ಮಠ , ಹಿರಿಯ ಕೃಷಿಕ ಶಿವಣ್ಣಗೌಡ ಕೆದ್ಕಾರ್ ಉದ್ಘಾಟಿಸಿದರು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ, ಅಂಗನವಾಡಿ ಸೀನಿಯರ್ ಸೂಪರ್ವೈಸರ್ ಶ್ರೀಮತಿ ಶೈಲಜಾ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧನ್ಯ, ಅಂಗನವಾಡಿ ಸಹಾಯಕಿ ಶ್ರೀಮತಿ ದೇವಮ್ಮ, ಅಜ್ಜಾವರ ಬಾಲ ವಿಕಾಸ ಸಮಿತಿಯ ಸದಸ್ಯರಾದ ಶ್ರೀಮತಿ ಬೇಬಿ, ಕುರುಂಜಿ ವೆಂಕಟರಮಣ ಗೌಡ ಆಯುರ್ವೇದ ಮಹಾವಿದ್ಯಾಲಯದ ಎಕ್ಸಿಕ್ಯೂಟಿವ್ ಜಗತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಲೇಜಿನ ಕಲಿಕಾ ವೈದ್ಯರಾದ ಅಂಕಿತ ,ಅನುಷಾ ,ದರ್ಶನ್ , ಕಿಶನ್. ಭಾಗವಹಿಸಿದ್ದರು.

ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಬಳ್ಕುಂಜ ಇಲ್ಲಿನ ವೈದ್ಯಾಧಿಕಾರಿ ಡಾ. ಶೋಭ ರಾಣಿ ಎನ್ ಎಸ್. ಪ್ರಾಸ್ತಾವಿಕ ಭಾಷಣ ಮಾಡಿ ಸೇವಾ ಗ್ರಾಮದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಪುಟಾಣಿಗಳು ಭಕ್ತಿಗೀತೆಯನ್ನು ಹಾಡಿ ಪ್ರಾರ್ಥನೆ ಮಾಡಿದರು. ಶ್ರೀಮತಿ ಧನ್ಯ ವಂದಿಸಿದರು.