ಬೊಳ್ಳಾಜೆ ಶಾಲೆಯ ವಿದ್ಯಾವರ್ಧಕ ಸಂಘದ ಸ್ಥಾಪಕಾಧ್ಯಕ್ಷ ವೆಂಕಟ್ರಮಣಯ್ಯ ಮಾಪಲಕಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ವೆಂಕಟ್ರಮಣಯ್ಯ ಎಂಬವರು ಇಂದು ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವೆಂಕಟ್ರಮಣಯ್ಯರವರು ಬೊಳ್ಳಾಜೆ ಶ್ರೀ ಶಾ.ಅ.ಹಿ.ಪ್ರಾ.ಶಾಲೆಯ ವಿದ್ಯಾವರ್ಧಕ ಸಂಘದ ಸ್ಥಾಪಕಾಧ್ಯಕ್ಷರಾಗಿ, ನೆಲ್ಲೂರು ಕೆಮ್ರಾಜೆ ಮತ್ತು ಉಬರಡ್ಕ‌ಮಿತ್ತೂರು ಪ್ರಾ.ಕೃ.ಪ.ಸ.ಸಂಘ ಜಂಟಿಯಾಗಿದ್ದ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರರಾದ ನೆಲ್ಲೂರು ಕೆಮ್ರಾಜೆ ಸೊಸೈಟಿ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಮಾಪಲಕಜೆ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸದಾನಂದ ಮಾಪಲಕಜೆ, ಕೃಷಿಕರಾಗಿರುವ ದಯಾನಂದ ಮಾಪಲಕಜೆ, ರಮಾನಂದ ಮಾಪಲಕಜೆ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪೂರ್ಣನಂದ, ಪುತ್ರಿಯರಾದ ಶ್ರೀಮತಿ ಪ್ರೇಮಾಲತಾ, ಶ್ರೀಮತಿ ಸವಿತಾ, ಶ್ರೀಮತಿ ಗೀತಾ, ಶ್ರೀಮತಿ ವಿದ್ಯಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು‌ ಅಗಲಿದ್ದಾರೆ.