ಬಾಳಿಲ: ಯುವ ಸೇವಾ ಸಂಘ ಮುಪ್ಪೇರ್ಯ ರಚನೆ

0

ಸಾಮಾಜಿಕ ಕೆಲಸ ಕಾರ್ಯಗಳಿಗೆ ಹಾಗೂ ಅಶಕ್ತರ ಬಾಳಿಗೆ ಬೆಳಕಾಗುವಲ್ಲಿ ಯುವಕರ ಸಂಘಟನೆಯ ಅಗತ್ಯತೆ ಮನಗಂಡು ಮುಪ್ಪೇರ್ಯ ಗ್ರಾಮದ ಯುವಕರು ಸಂಘಟಿತಗೊಂಡು “ಯುವ ಸೇವಾ ಸಂಘಮುಪ್ಪೇರ್ಯ” ವನ್ನು ರಚಿಸಿದ್ದಾರೆ.
ಜ. 14ರಂದು ಸಂಘದ ಸರ್ವ ಸದಸ್ಯರು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಸರ್ವಸೇವೆ ಸಲ್ಲಿಸುದರ ಮೂಲಕ ಸಂಘಕ್ಕೆ ಚಾಲನೆ ನೀಡಿದರು. ನೂತನ ಸಂಘದ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.