ನುಡಿದಂತೆ ನಡೆದ ಸಚಿವ ಅಂಗಾರ : ಇಂದಿನಿಂದ ಕಾಮಗಾರಿ ಆರಂಭ
ಬಹುಬೇಡಿಕೆಯ ಅರಂತೋಡು – ಅಡ್ತಲೆ – ಎಲಿಮಲೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ.
ಈ ರಸ್ತೆ ಅಭಿವೃದ್ಧಿ ಗಾಗಿ ಹಲವು ವರ್ಷಗಳಿಂದ ಈ ಭಾಗದ ಸಾರ್ವಜನಿಕರು ಬೇಡಿಕೆ ಮುಂದಿಟ್ಟಿದ್ದರು. ಅರಂತೋಡು ನಾಗರಿಕ ಹಿತರಕ್ಷಣಾ ವೇದಿಕೆಯವರು ಹಲವು ಬಾರಿ ಶಾಸಕರಾದಿಯಾಗಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಕಳೆದ ಬಾರಿ ಮತದಾನ ಬಹಿಷ್ಕಾರದ ಬ್ಯಾನರ್ ದಾರಿಯುದ್ದಕ್ಕೂ ಅಳವಡಿಸಲಾಗಿತ್ತು.
ಇತ್ತೀಚೆಗೆ ಈ ರಸ್ತೆಯ ಅಭಿವೃದ್ಧಿ ಗಾಗಿ ಸಚಿವ ಎಸ್.ಅಂಗಾರರು ಮೂರು ಕೋಟಿ ರೂ ಅನುದಾನ ಇರಿಸಿದ್ದು ವಾರದ ಹಿಂದೆ ಗುದ್ದಲಿಪೂಜೆ ನೆರವೇರಿಸಿದರು. ಗುದ್ದಲಿಪೂಜೆ ದಿನ ಸಚಿವ ಎಸ್.ಅಂಗಾರರು ವಾರದೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.
ಅದರಂತೆ ಗುದ್ದಲಿಪೂಜೆ ನಡೆದು ಇಂದಿಗೆ ಒಂದು ವಾರವಾಗುತ್ತಿದ್ದಂತೆ ಆ ರಸ್ತೆಯ ಕಾಮಗಾರಿ ಆರಂಭಗೊಂಡಿದೆ.