ಜೋಡುಪಾಲದಲ್ಲಿ ಸರಣಿ ಅಪಘಾತ, ಕಾರು ಸಂಪೂರ್ಣ ಜಖಂ

0

ಮಾಣಿ ಮೈಸೂರು ಹೆದ್ದಾರಿ ಜೋಡುಪಾಲ ಸಮೀಪ ತಿರುವಿನಲ್ಲಿ ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಹೋಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಾರಿಗೆ ಗುದ್ದಿದ ಪರಿಣಾಮ ಮೂರು ವಾಹನಗಳು ಜಖಂ ಗೊಂಡ ಘಟನೆ ಜ.16 ರಂದು ರಾತ್ರಿ ಸಂಭವಿಸಿದೆ.
ಘಟನೆಯಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.


ಮಡಿಕೇರಿ ಯಿಂದ ಭತ್ತ ತುಂಬಿಸಿಕೊಂಡು ಉಪ್ಪಿನಂಗಡಿ ಭಾಗಕ್ಕೆ ಹೋಗುತ್ತಿದ್ದ ರೈತ ಬಂದು ಲಾರಿ ಜೋಡುಪಾಲ ತಿರುವಿನಲ್ಲಿ ಚಾಲಕನ ನಿಯಂತ್ರಣದ ತಪ್ಪಿ ಮುಂಭಾಗದಲ್ಲಿ ಹೋಗುತ್ತಿದ್ದ ಕಟ್ಟಿಗೆ ಉಪಯೋಗದ ಮರದ ತುಂಡುಗಳನ್ನು ತುಂಬಿದ ಲಾರಿಗೆ ಡಿಕ್ಕಿ ಹೊಡೆದಿದೆ.


ಈ ಘಟನೆಯಿಂದ ಎರಡು ವಾಹನಗಳು ನಿಯಂತ್ರಣತಪ್ಪಿ ಮಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಅಪ್ಪಳಿಸಿದ್ದು ಕಾರು ಸಂಪೂರ್ಣ ಜಕಂಗೊಂಡಿದೆ.
ಕಾರಿನಲ್ಲಿ ಚಾಲಕ ಮಾತ್ರ ಇದ್ದು ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.
ಕಟ್ಟಿಗೆ ತುಂಬಿದ ಲಾರಿ ಸುಳ್ಯ ಮೂಲದ ಹಳೆಗೇಟು ನಿವಾಸಿ ಜಿ ಕೆ ರಾಜ್ಜಾಕ್ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.