ಪಂಜ: ಕಾಳು ಮೆಣಸು ಗರಿ ಬಿಡಿಸುವ ಯಂತ್ರ ಮತ್ತು ಅಡಿಕೆ ಮರ ಏರುವ ಯಂತ್ರಕ್ಕೆ ಚಾಲನೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ಸದಸ್ಯರ ಅನುಕೂಲಕ್ಕಾಗಿ ಕಾಳು ಮೆಣಸು ಗರಿ ಬಿಡಿಸುವ ಯಂತ್ರ ಮತ್ತು ಅಡಿಕೆ ಮರಕ್ಕೆ ಏರಲು ಸೈಕಲ್ ಯಂತ್ರಕ್ಕೆ ಜ.17ರಂದು ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಗಣೇಶ್ ಪೈ , ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ,ಲಿಗೋಧರ ಆಚಾರ್ಯ, ವಾಚಣ್ಣ ಕೆರೆಮೂಲೆ ಚಿನ್ನಪ್ಪ ಚೊಟ್ಟೆಮಜಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಕ್ಯಾಂಪ್ಕೋ ವ್ಯವಸ್ಥಾಪಕ ರಾಘವ,ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.