ಅನಾರೋಗ್ಯ ಪೀಡಿತ ಮಹಿಳೆಗೆ ಆರೋಗ್ಯ ರಕ್ಷಾ ಯೋಜನೆಯಲ್ಲಿ‌ ಸಹಾಯ ಧನ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ಅಜ್ಜಾವರ ವಲಯ ಒಕ್ಕೂಟದ ಬರ್ಕತ್ ಸಂಘದ ಸದಸ್ಯೆ ಮರಿಯಮ್ಮ ಎಂಬವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಆರೋಗ್ಯ ರಕ್ಷಾ ಯೋಜನೆ ಯಡಿಯಲ್ಲಿ ರೂ. 20 ಸಾವಿರ ಸಹಾಯ ಧನ ವಿತರಿಸಲಾಯಿತು.

ಕಛೇರಿ ಪ್ರಬಂಧಕ ಅತೀಶ್ ದೇವಾಡಿಗ, ವಲಯದ ಮೇಲ್ವಿಚಾರಕಿ ಶ್ರೀಮತಿ ವಿಶಾಲ ರವರು ಅನಾರೋಗ್ಯ ಪೀಡಿತ ಮರಿಯಮ್ಮ ರವರಿಗೆ‌ ಸಹಾಯಧನ ಚೆಕ್ ನ್ನು ಹಸ್ತಾಂತರಿಸಿದರು.