ರಾಜ್ಯ ಯುವ ಸಮ್ಮೇಳನದಲ್ಲಿ ಎಂ.ಎಸ್.ಜಯಪ್ರಕಾಶ್ ರಿಗೆ ಸನ್ಮಾನ

0

ಕರ್ನಾಟಕ ಸರಕಾರ ,ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ,ರಾಪ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ವತಿಯಿಂದ, ವ್ಯವಸ್ಥಾಪನಾ ಸಮಿತಿ, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇದರ ಸಹಕಾರದೊಂದಿಗೆ ಸುಬ್ರಹ್ಮಣ್ಯ ದಲ್ಲಿ ನಡೆದ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ರಾಜ್ಯದ 31 ಜಿಲ್ಲೆಗಳ 31 ಯುವ ಪ್ರತಿಭೆ ಗಳಿಗೆ ಪ್ರಶಸ್ಥಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ತೀರ್ಪುಗಾರ, ರಂಗಭೂಮಿ ಮತ್ತು ಚಲನ ಚಿತ್ರ ಕಲಾವಿದ, ಜಿಲ್ಲಾ ಸಾಹಿತ್ಯ ಪ್ರಶಸ್ಥಿ ವಿಜೇತ,ಹತ್ತು ಹಲವಾರು ಸಂಘಟನೆ ಗಳಲ್ಲಿ ತೊಡಗಿಸಿಕೊಂಡ ನಾಟಕ ನಿರ್ದೇಶಕ ಹಾಗೂ ರಂಗಭೂಮಿ ನಟ, ಕರ್ನಾಟಕ ರಾಜ್ಯ ಅರೆಬಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಯ ಮಾಜಿ ಸದಸ್ಯ ಬಿಳಿನೆಲೆ ಜಯಪ್ರಕಾಶ್ ಮೋಂಟಡ್ಕ ಇವರನ್ನು ವಿಷೇಷ ಸಾಧನೆಗಾಗಿ ವಿಷೇಷವಾಗಿ ಸನ್ಮಾನಿಸಲಾಯಿತು.